News & Events
ನಾಲಂದದಲ್ಲಿ ಜನ್ಮದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಗಳ ಜನ್ಮದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ಟರು ಭಾಗವಹಿಸಿದರು. ದೇಶದ ಜನರನ್ನು ಸಂಘಟಿಸಿ ಬ್ರಿಟೀಷರ ವಿರುದ್ದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಮೊದಲಾದ ಚಳವಳಿಗಳನ್ನು ನಡೆಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಹೇಳಿದ್ದಲ್ಲದೆ ಅವರ ಬದುಕಿನ ಮಹತ್ವದ ಘಟನೆಗಳನ್ನು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಗಳ ಬಗ್ಗೆ ಮಾತನಾಡುತ್ತಾ
ನಾಲಂದದಲ್ಲಿ ವಿಶ್ವ ಆಹಾರ ದಿನ ಆಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಈ ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಹಿಂದಿ ಸಹಪ್ರಾಧ್ಯಾಪಕಿ ಶಾಂಭವಿಯವರು ಇಂದು ಜನರು ವಾಣಿಜ್ಯ ಬೆಳೆಗಳನ್ನು ಬೆಳೆಸಿ ತಮ್ಮ ಸಂಪತ್ತನ್ನು ಹೆಚ್ಚಿಸುತ್ತಾ ಸುಖ ಭೋಗಗಳ ಕಡೆಗೆ ಮಾರು ಹೋದದ್ದರಿಂದ ಆಹಾರ ಉತ್ಪನ್ನಗಳ ಪ್ರಮಾಣ ಕುಸಿಯುತ್ತಿದೆ. ಇದು ಮುಂದೆ ಒಂದು ಕಾಲಕ್ಕೆ ತೀವ್ರ ಸಂಕಷ್ಟಕ್ಕೆ ಎಡೆಮಾಡಿಕೊಡುತ್ತದೆ. ಆದುದರಿಂದ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಕಡೆಗೆ ಯುವಕರು ಮನಸ್ಸು ಮಾಡಬೇಕು, ಬದುಕಲು ಸಂಪತ್ತಿಗಿಂತ ಆಹಾರ ಮುಖ್ಯ ಎಂದರು.
ರಕ್ತದಾನ ಕುರಿತು ಕಾರ್ಯಾಗಾರ
ಪೆರ್ಲ: ನಾಲಂದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸ್ವಯಂ ರಕ್ತದಾನದ ಕುರಿತಾಗಿ ಕಾರ್ಯಗಾರ ನಡೆಯಿತು. ರಕ್ತದಾನವೆಂಬುವುದು ಮಹಾದಾನ. ಅದನ್ನು ಮೂರು ತಿಂಗಳಿಗೊಮ್ಮೆ ಫಲಾಪೇಕ್ಷೆ ಇಲ್ಲದೇ ದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯವಿದೆ. ಯುವ ಜನಾಂಗ ರಕ್ತದಾನ ಮಾಡುವುದರಿಂದ ತಮ್ಮ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚುವುದಲ್ಲದೇ ತಮ್ಮ ಆರೋಗ್ಯದ ಹಿತದೃಷ್ಟಿಯಲ್ಲಿಯೂ ಉತ್ತಮ ಎಂದು ಬ್ಲಡ್ ಬ್ಯಾಂಕ್ನ ಸಂಯೋಜಕ ವಿನೋದ್ ಕುಮಾರ್ ವಿ. ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶಂಕರ ಖಂಡಿಗೆ ಅಧ್ಯಕ್ಷತೆಯನ್ನು
ನಾಲಂದದಲ್ಲಿ ಹಿಂದಿ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ಸಾಹಿತ್ಯ ಸಂಘದವತಿಯಿಂದ ಇತ್ತೀಚೆಗೆ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದುರ್ಗಾರತ್ನ ಸಿ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಹಿಂದಿ ಸಾಹಿತ್ಯ ಸಾಮ್ರಾಟ ಪ್ರೇಮ್ ಚಂದ್ರ ಕಾದಂಬರಿ, ಕಥೆಗಳಲ್ಲಿರುವ ಸಾಮಾಜಿಕತೆಯನ್ನು ಗುರುತಿಸಿದ ಅವರು ಅಸ್ಪೃಶ್ಯತೆ, ಅಸಮಾನತೆ, ಬಾಲ್ಯ ವಿವಾಹ, ವಿಧವಾತನ, ಹಸಿವಿನ ತೀವ್ರತೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದಲ್ಲದೆ ಹಿಂದಿ ಭಾಷೆಯ ಮಹತ್ವವನ್ನು ಗುರುತಿಸಿ ಮಕ್ಕಳಲ್ಲಿ ಹಿಂದಿ ಬಗ್ಗೆ ಆಸಕ್ತಿ ಮೂಡಿಸಿದರು. ಹಲವು ಭಾಷೆಗಳನ್ನು ಕಲಿತುಕೊಂಡರೆ
ನಾಲಂದ ಎನ್ ಎಸ್ ಎಸ್ ಘಟಕದಿಂದ ಬಡ್ಸ್ ಶಾಲೆ ಭೇಟಿ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಇತ್ತೀಚೆಗೆ ಪೆರ್ಲ ಕನ್ನಟಿಕಾನದಲ್ಲಿರುವ ’ಬಡ್ಸ್’ ಶಾಲೆಗೆ ಬೇಟಿ ಕೊಡುವುದರ ಮೂಲಕ ಎನ್. ಎಸ್.ಎಸ್ ದಿನವನ್ನು ಆಚರಿಸಿತು. ಎನ್.ಎಸ್.ಎಸ್ ಸದಸ್ಯರು ಆ ಶಾಲೆಯ ಮಕ್ಕಳ ಮುಂದೆ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು. ಹೊಸ ತಂತ್ರಜ್ಞಾನಗಳಿಂದ ಕೂಡಿದ ಆಧುನಿಕ ಯುಗದಲ್ಲಿ ಅವು ಯಾವುದರ ಪರಿವೆಯೇ ಇಲ್ಲದೆ ಬದುಕುತ್ತಿರುವ ಮುಗ್ದ ಮಕ್ಕಳು ಈ ಬಡ್ಸ್ ಶಾಲೆಯಲ್ಲಿದ್ದಾರೆ. ಹೊರ ಪ್ರಪಂಚದ ಜ್ಞಾನವಿಲ್ಲದ ಮತ್ತು ಯಾವ ಸುಖ ಸಂತೋಷವನ್ನು ಅರಿಯದ ಮುಗ್ದ ಮಕ್ಕಳನ್ನು ಒಂದಷ್ಟು ಹೊತ್ತು ಸಂತೋಷಗೊಳಿಸಿ ಅವರ
ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಭೇಟಿ
ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ್ರವರು ದಿನಾಂಕ 23-09-2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಉಪನ್ಯಾಸಕ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರು ಆದರೆ ಪ್ರತಿಭೆಯನ್ನು ಎಲ್ಲಿ, ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ಮಾರ್ಗದರ್ಶನದ ಕೊರತೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ವ್ಯಕ್ತಿಗತ ಜೀವನ ವಿಕಾಸಕ್ಕೆ ಅನುಕೂಲವಾಗುವ ರೀತಿಯ ವಿಷಯಗಳನ್ನು ತಿಳಿಸಿ ಅವರನ್ನು ಸರಿಯಾದ ದಾರಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ನಮ್ಮಲ್ಲಿದೆ. ಆದುದರಿಂದ ನಾವು ಬೆಳೆಯಬೇಕು ಅವರನ್ನು
ನಾಲಂದದಲ್ಲಿ ಓಣಂ ಆಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಅಂದು ನಡೆದ ಸಭಾ ಕಾರ್ಯಕ್ರಮದಲ್ಲಿ ನಾಯಮ್ಮಾರಮೂಲೆ ಟಿ.ಐ.ಎಚ್.ಎಸ್ ಶಾಲೆಯ ಗಣಿತ ಅಧ್ಯಾಪಕ ಸತೀಶನ್ ಕೆ. ಯವರು ಮುಖ್ಯ ಅತಿಥಿಗಳಾಗಿದ್ದರು. ಓಣಂ ನಾಡಹಬ್ಬ ಮಾತ್ರವಲ್ಲದೆ ಕೃಷಿಕರ ಉತ್ಸವವಾಗಿದೆ. ಸಮಾನತೆ ಮತ್ತು ಸಹೋದರತ್ವವನ್ನು ಉಳಿಸಿ ಬೆಳೆಸುವ ಹಬ್ಬವೇ ಓಣಂ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷರು ಅಧ್ಯಕ್ಷತೆ ವಹಿಸಿ ಓಣಂನ ವಿಶೇಷತೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜು ಆಡಳಿತ ಮಂಡಳಿಯ
ಜಯರಾಮ ಅವರಿಂದ ಯೋಗ ಪ್ರಾತ್ಯಕ್ಷಿಕೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ತರಗತಿಯ ಸಂಯೋಜಕರು ಆದ ಯೋಗಗುರು ಬಿ. ಜಯರಾಮ ಅವರು ಇತ್ತೀಚೆಗೆ ಯೋಗದ ಪ್ರಾತ್ಯಕ್ಷಿಕೆಯನ್ನು ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಈ ತರಗತಿ ನಡೆಯಿತು. ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಗ ಮನುಷ್ಯನ ಶಾರೀರಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಸಹಕರಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಯೋಗ ಗುರುಗಳು ಒಂದು ದಿನದ ಯೋಗ ಪ್ರಾತ್ಯಕ್ಷಿಕೆಯನ್ನು ವಿವಿಧ ತರಗಳ ವಿದ್ಯಾರ್ಥಿ ಬಳಗಕ್ಕೆ
ಶಿಕ್ಷಕರ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಮದರಾಸು ಪ್ರೆಸಿಡೆನ್ಸಿ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಚಾರ್ಯ ಡಾ| ಮಹಾಲಿಂಗ ಭಟ್ಟ ಕಾನತ್ತಿಲರವರನ್ನು ಗೌರವಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ತಮ್ಮನ್ನು ಗೌರವಿಸಿದ್ದಕ್ಕೆ ಕೃತಜ್ಙತೆ ಸಲ್ಲಿಸಿ ಮಾತನಾಡಿದ ಡಾ| ಮಹಾಲಿಂಗ ಭಟ್ ಶಿಕ್ಷಣದ ಮೂಲಕ ಉತ್ತಮ ಸಂಸ್ಕಾರ ಮೂಡುತ್ತದೆ. ವೇದಾಂತ, ತತ್ವ ಶಾಸ್ತ್ರಗಳು ಧರ್ಮಸಮನ್ವಯ ಮತ್ತು ಸಹಿಷ್ಣುತೆಯನ್ನು ಬೋಧಿಸುತ್ತವೆ. ಇವೆರಡನ್ನು ಮೈಗೂಡಿಸಿಕೊಂಡರೆ ನಾಡು ಉತ್ತಮಗೊಳ್ಳುವುದರಲ್ಲಿ ಸಂಶಯಬೇಡ ಎಂದರು. ಡಾ| ಸರ್ವಪಳ್ಳಿ ರಾಧಾಕೃಷ್ಣನ್ರವರ ಆದರ್ಶ ಮತ್ತು ವ್ಯಕ್ತಿತ್ವಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಕಾಲೇಜಿನ
ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು – ನಾಲಂದದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಕೃಷಿಕನೇ ಭಾರತದ ಬೆನ್ನೆಲುಬು. ಆದರೆ ಇಂದು ಭಾರತದಲ್ಲಿ ಜನಸಂಖ್ಯೆಯ ಕ್ಷಿಪ್ರ ಬೆಳವಣಿಗೆಯಾಗುತ್ತದೆ. ಅದಕ್ಕೆ ಅನುಸರಿಸಿ ಕೃಷಿಯೂ ಬೆಳವಣಿಗೆ ಹೊಂದಬೇಕಾದದ್ದು ಅನಿವಾರ್ಯ. ಕೃಷಿ ಅಭಿವೃದ್ದಿಯಾಗದಿದ್ದರೆ ಮುಂದೆ ದೇಶ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಕಾಸರಗೋಡು ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ. ಪಿ.ಚೌಡಪ್ಪನವರು ಅಭಿಪ್ರಾಯಪಟ್ಟರು. ಅವರು ಪೆರ್ಲ ನಾಲಂದ ಕಾಲೇಜಿನಲ್ಲಿ (27-08-2016 ರಂದು) ನಡೆದ ’ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾದ್ಯತೆಗಳು’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಸಂಖ್ಯೆಯನ್ನು ಆಧರಿಸಿಕೊಂಡು ಆಹಾರ ಉತ್ಪಾದಿಸಲು ಸಾಧ್ಯವಿಲ್ಲ.