×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ದೇಶದ 70 ನೇ ಸ್ವಾತಂತ್ರ್ಯ ದಿನವನ್ನು ಕವಿ, ಸಾಹಿತಿ ಹಾಗೂ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ವಾಸುದೇವ ಭಟ್‌ರವರು ಧ್ವಜಾರೋಹಣವನ್ನು ಮಾಡುವುದರ ಮೂಲಕ ಆಚರಿಸಲಾಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ವಾಸುದೇವ ಭಟ್‌ರವರು ಮಾತನಾಡುತ್ತ ಭಾರತಮಾತೆಯ ಮಕ್ಕಳಾದ ನಾವು ಈ ಮಣ್ಣು, ಈ ನಾಡು ನಮ್ಮದು ಎಂದು ಪ್ರೀತಿಸಿ ರಕ್ಷಿಸಿಕೊಂಡು ಬಂದರೆ ಮಾತ್ರ ಭಾರತ ಎಲ್ಲ ಕ್ಷೇತ್ರಗಳಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯ ಎಂದರು.

Read More

ನಾಲಂದದಲ್ಲಿ ವಿಚಾರಸಂಕಿರಣ

ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಆದೇಶದಂತೆ ಪೆರ್ಲ ನಾಲಂದ ಮಹಾವಿದ್ಯಾನಿಲಯದ ಎನ್. ಎಸ್. ಎಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ’ಯುವಜನಾಂಗದಿಂದ ಸುಸ್ಥಿರ ಬಡತನ ನಿರ್ಮೂಲನೆ, ಉಪಯೋಗ ಮತ್ತು ಉತ್ಪಾದನೆ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಆಗಸ್ಟ್ 12 ರಂದು ನಡೆಯಿತು. ದಾರಿದ್ರ್ಯವನ್ನು ಹೋಗಲಾಡಿಸಲು ಯುವಜನತೆ ಉದ್ಯೋಗಗಳಿಸುವಲ್ಲಿ ತಮ್ಮ ಸತತ ಪ್ರಯತ್ನದಿಂದ ಸಫಲರಾಗಬೇಕು, ಬ್ಯಾಂಕಿಂಗ್, ಕೈಗಾರಿಕೆ, ಕೃಷಿ ಮೊದಲಾದ ವಲಯಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶವಿದ್ದು ಯುವಜನತೆ ಸ್ಪರ್ಧಾತ್ಮಕವಾಗಿ ಆಧುನಿಕ ತಂತ್ರಜ್ಞಾನ ಮಾಹಿತಿಗಳೊಂದಿಗೆ ಉದ್ಯೋಗಳಿಸಬೇಕು.

Read More

ಬ್ಯಾಂಕಿಂಗ್‌ನ ಪ್ರಚಲಿತ ವಿದ್ಯಮಾನಗಳು – ವಿಚಾರ ಸಂಕಿರಣ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಬಾರ್ಡ್‌ನ ವತಿಯಲ್ಲಿ ‘ಬ್ಯಾಂಕಿಂಗ್‌ನ ಪ್ರಚಲಿತ ವಿದ್ಯಮಾನಗಳು’ ಎಂಬ ವಿಷಯದ ಕುರಿತು 8 ಆಗಸ್ಟ್ 2016 ರಂದು ವಿಚಾರ ಸಂಕಿರಣ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಬಾರ್ಡ್‌ನ ಪಿ.ಎ.ಸಿ.ಯಸ್ ಡೆವಲಪ್‌ಮೆಂಟ್ ಸೆಲ್‌ನ ಶ್ರೀ ಕೆ.ನಾರಾಯಣ ಮತ್ತು ಶ್ರೀ ಸೌಜಿತ್ ಆಂಟನಿಯವರು ಭಾಗವಹಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ|ಕೆ. ಕಮಲಾಕ್ಷರು ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಸಮಪನ್ಮೂಲ ವ್ಯಕ್ತಿಗಳು ’ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್, ಇ-ಫಂಡ್ ಟ್ರಾನ್ಸ್ಫರ್, ಐ.ಎಫ್.ಎಸ್.ಸಿ ಮೊದಲಾದ ವ್ಯವಸ್ಥೆಗಳ ಸಾಧಕ-ಭಾದಕಗಳ

Read More

ನಾಲಂದದಲ್ಲಿ ಎನ್.ಎಸ್.ಎಸ್. ಸೆಮಿನಾರ್

ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಗತಿ ನಡೆಸಿಕೊಡಲಾಯಿತು. ಮುನ್ನಾಡ್ ಪೀಪಲ್ಸ್ ಕೋ-ಆಪರೇಟಿವ್ ಕಾಲೇಜಿನ ಮೇನೇಜೆಮೆಂಟ್ ವಿಭಾಗದ ಮುಖ್ಯಸ್ಥ ಶ್ರೀ ಪುಷ್ಪಾಕರ ಬೆಂಡಿಚ್ಚಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಮಾಜಸೇವೆ ಎಂಬುದು ಮನುಷ್ಯನ ಅಂತರಾಳದಿಂದ ಉದಿಸಿ ಬರಬೇಕೆ ಹೊರತು ಅದು ಒತ್ತಾಯದಿಂದ ಬರಬಾರದು. ಆಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಸಮಾಜ ಸೇವಕನಾಗುತ್ತಾನೆ. ಪಾಶ್ಚಾತ್ಯ ಪ್ರಭಾವದಿಂದ ಮಾನವನಲ್ಲಿ ಸ್ವಾರ್ಥ ಹೆಚ್ಚುತ್ತಿದೆ ಮಾತ್ರವಲ್ಲದೆ ವೃಷ್ಠಿ ಚಿಂತೆಯೇ ಹೊರತು ಸಮಷ್ಠಿಯ ಚಿಂತನೆ ಇಲ್ಲವಾಗುವ ಈ ಕಾಲಘಟ್ಟದಲ್ಲಿ

Read More

ಅಂತಾರಾಷ್ಟ್ರೀಯ ಕಾಂಡ್ಲ ಕಾಡು ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದ ಭೂಮಿತ್ರ ಸೇನಾ ಕ್ಲಬ್ ಮತ್ತು ಗೇಲಕ್ಷಿ ಕ್ಲಬ್‌ಗಳು ಜಂಟಿಯಾಗಿ ‘ಅಂತಾರಾಷ್ಟ್ರೀಯ ಕಾಂಡ್ಲ ಕಾಡು ದಿನ’ವನ್ನು ಆಚರಿಸಿತು. ಅಂತಿಮ ಬಿ.ಎಸ್ಸಿಯ ಮಾಕ್ಸಿಂ ರೋಡ್ರೀಗಸ್ ರವರು ಕಾಂಡ್ಲ ಸಸ್ಯಗಳು ಸಮುದ್ರದ ದಡದಲ್ಲಿ ಬೆಳೆಯುವ ಒಂದು ಜಾತಿಯ ಸಸ್ಯ. ಇದರ ಬೀಜಗಳು ನೀರು ಇಳಿದಿರುವ ಸಮಯ ನೋಡಿ ಮರಳಿನಲ್ಲಿ ಬೇರು ಬಿಟ್ಟು ಹುಲುಸಾಗಿ ಬೆಳೆಯುತ್ತವೆ. ಇದು ಚಂಡಮಾರುತ ಮತ್ತು ಸಮುದ್ರ ಕೊರೆತಗಳನ್ನು ತಡೆಗಟ್ಟಲು ಅನುಕೂಲವಾಗಿದೆ. ಜಲಚರಗಳ ವಂಶಾಭಿವೃದ್ಧಿಗೂ ಸಹಾಯಕವಾಗಿದೆ. ಇಂಡೋನೇಷ್ಯಾ, ಅಂಡಮಾನ್ ನಿಕೋಬಾರ್ ಮುಂತಾದ ದೇಶಗಳ ತೀರ

Read More

’ಸ್ಮಾರ್ಟ್ ಎಂಡ್ ಸಕ್ಸಸ್‌ಫುಲ್ ಓಂಟ್ರ್‌ಪೃನರ್’

ಪೆರ್ಲ ನಾಲಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಮೆನೇಜ್‌ಮೆಂಟ್ ವಿಭಾಗಗಳ ಜಂಟಿ ಪ್ರಾಯೋಜಕತ್ವದಲ್ಲಿ ’ಸ್ಮಾರ್ಟ್ ಎಂಡ್ ಸಕ್ಸಸ್‌ಫುಲ್ ಓಂಟ್ರ್‌ಪೃನರ್’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರವು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮುನ್ನಾಡು ಪೀಪಲ್ಸ್ ಕೋ ಆಪರೇಟರ್ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ, J.C.I  ತರಬೇತುದಾರ, ಎನ್.ಎಸ್. ಎಸ್ ಯೋಜನಾಧಿಕಾರಿ ಮತ್ತು ಲೇಖಕರೂ ಆದ ಶ್ರೀ ಪುಷ್ಪಾಕರನ್ ಬಂಡಿಚ್ಚಾಲ್ ಆಗಮಿಸಿದ್ದರು. ಕಾಲದ ಬದಲಾವಣೆಗೆ ತಕ್ಕಂತೆ ನಾವು ಎಲ್ಲಾ ವಿದ್ಯಾಮಾನಗಳನ್ನು ಅರಿತುಕೊಂಡು ಮುಂದಿನ ಹತ್ತು ವರ್ಷದಲ್ಲಿ ನಡೆಯಬಹುದಾದುದನ್ನು ಮುಂಚಿತವಾಗಿ ಚಿಂತಿಸುವಷ್ಷು

Read More

’ವಿಶ್ವ ಉರಗ ದಿನ’ ಆಚರಣೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್‌ನ ವತಿಯಲ್ಲಿ ’ವಿಶ್ವ ಉರಗ ದಿನ’ವನ್ನು ಆಚರಿಸಲಾಯಿತು. ಈ ಕಾರ್‍ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್‌ರವರು ವಹಿಸಿದ್ದರು. ಕಲ್ಲನಾಗರ ಕಂಡರೆ ಹಾಲೆರೆಯೆಂಬರಯ್ಯ, ದಿಟದ ನಾಗರ ಕಂಡರೆ ಹೊಡೆಯೆಂಬರಯ್ಯ ಎಂಬ ವಚನದ ಸಾಲನ್ನು ಉಲ್ಲೇಖಿಸುತ್ತಾ, ಹಿಂದೂ ಸಂಸ್ಕ್ರತಿಯಲ್ಲಿ ನಾಗನಿಗೆ ದೇವರ ಸ್ಥಾನವಿದೆ ಎಂದರು. ಭೂಮಿತ್ರ ಸೇನೆಯ ಸಂಚಾಲಕರಾದ ರಂಜಿತ್ ಕುಮಾರ್‌ರವರು ದಿನದ ಪ್ರತ್ಯೇಕತೆಯನ್ನು ವಿವರಿಸಿದರು. ಕಾಡು ನಾಶವಾದರೆ ಹಾವುಗಳೂ ನಾಶವಾದಂತೆ, ಹಾವನ್ನು ಕೊಲ್ಲದೆ ಬದುಕಲು ಬಿಡಬೇಕು ಪ್ರಕೃತಿಯಲ್ಲಿ

Read More

ವಿಶ್ವ ಜನಸಂಖ್ಯಾ ದಿನಾಚರಣೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್ ಹಾಗೂ ಎನ್. ಎಸ್. ಎಸ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಯುತ ಅಶೋಕ ಮೊಟ್ಟಕುಂಜ ಅವರು ವಹಿಸಿ ’ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಜನಸಂಖ್ಯಾ ನಿಯಂತ್ರಣ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯ ದೃಷ್ಠಿಯಲ್ಲಿ ಮೌಲ್ಯಾಧಾರಿತ ಕೌಟುಂಬಿಕ ರಚನೆ ಅಗತ್ಯ’ ಎಂದು ನುಡಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀ ನಾರಾಯಣ ಶೆಟ್ಟಿಯವರು ಜನಸಂಖ್ಯೆಯ ಹೆಚ್ಚಳದಿಂದ ಆಗುತ್ತಿರುವ ಪರಿಣಾಮಗಳ

Read More

ಸಾಹಿತ್ಯ ಸಂಘ ಉದ್ಘಾಟನೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಸಾಹಿತಿಯೂ ಆದ ಡಾ| ಹರಿಕೃಷ್ಣ ಭರಣ್ಯ ನೆರವೇರಿಸಿದರು. ಕಾಸರಗೋಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ, ಸಂಗೀತ, ಭಾಷಾ ವೈವಿಧ್ಯಗಳು ಜಗತ್ತಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಡೀ ಜಗತ್ತು ಇಲ್ಲಿದೆ. ಇಂತಹ ಶ್ರೀಮಂತ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಯಾರೂ ಒಮ್ಮೆಲೇ ದೊಡ್ಡ ಕವಿಯೋ ಸಾಹಿತಿಯೋ ಆಗಲಾರರು. ಶಾಲಾ ಮಟ್ಟದಲ್ಲಿ ಇದನ್ನು ರೂಢಿಸಿಕೊಂಡು ಬೆಳೆಯ ಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು

Read More