News & Events
ಶಿಶುಮಂದಿರಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಯುತ್ತದೆ – ಡಾ| ಪ್ರಭಾಕರ ಭಟ್ ಕಲ್ಲಡ್ಕ
ಪೆರ್ಲ : ಒಂದು ವಸ್ತುವನ್ನು ಪರೀಕ್ಷಿಸಿ ಅದರಲ್ಲಿರುವ ವಿಶೇಷತೆಗಳನ್ನು ಗ್ರಹಿಸುವ ವೈಜ್ಞಾನಿಕ ಮನೋಧರ್ಮ ಶಿಶುಮಂದಿರದಲ್ಲಿ ಕಲಿಯುವ ಮಕ್ಕಳಲ್ಲಿ ಬೆಳೆಯುತ್ತದೆ. ಇದು ವಿಜ್ಞಾನಿ ಮನೋಧರ್ಮ. ಮಗು ಅದರಷ್ಟಕ್ಕೆ ನಲಿಯುತ್ತ ಕಲಿಯಬೇಕು. ಕಲಿಯುತ್ತ ಬೆಳೆಯಬೇಕು. ಅದಕ್ಕಾಗಿ ಮಗುವನ್ನು ಎಳವೆಯಲ್ಲಿ ನಿರ್ಬಂಧಿಸಬಾರದು. ಅವರ ಇಚ್ಛಾನುಸಾರ ಬೆಳೆಯಲು ಬಿಟ್ಟಾಗ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ನಮ್ಮ ಶಿಶುಮಂದಿರದ ಪರಿಕಲ್ಪನೆಯೆ ಅಂತಹುದು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ಪೆರ್ಲ ನಾಲಂದ ಮಹಾ ವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ ’ವಿವೇಕಾನಂದ ಶಿಶುಮಂದಿರ’ ದ
ವಿಶ್ವ ಪರಿಸರ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎನ್.ಎಸ್.ಎಸ್ ಮತ್ತು ಭೂಮಿತ್ರ ಸೇನೆ ಕ್ಲಬ್ ವತಿಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ವಿದ್ಯಾಲಯದ ಪರಿಸರವನ್ನು ಶುಚಿಗೂಳಿಸಿ ಸಸಿಗಳನ್ನು ನಟ್ಟು ಪರಿಸರದಲ್ಲಿ ಹಸಿರು ತುಂಬಲು ನೆರವಾದರು. ಅನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಕೆ. ಕಮಲಾಕ್ಷರು ಯುವ ಜನಾಂಗ ಪ್ರಕೃತಿಯನ್ನು ಪ್ರೀತಿಸಿ, ರಕ್ಷಿಸಿದರೆ ಮುಂದೆ ಸಕಲ ಜೀವರಾಶಿಗಳಿಗಾಗುವ ದುರಂತವನ್ನು ತಪ್ಪಿಸಬಹುದು ಎಂದರು. ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ. ಶಿವಕುಮಾರರು ಮಾತಾನಾಡುತ್ತ ಮಾನವ ಪ್ರಕೃತಿಗೆ ವಿಷವನ್ನು ಬಿಡುತ್ತಾನೆ ಆದರೆ ಅದನ್ನು ಸ್ವೀಕರಿಸಿ ಸಸ್ಯಗಳು ಮಾನವನಿಗೆ
ವಾರ್ಷಿಕ ಮಹಾಸಭೆ
ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ವಾರ್ಷಿಕ ಮಹಾಸಭೆ ಮೇ 26 ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ನಾಲಂದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಆನೆಮಜಲು ವಿಷ್ಣು ಭಟ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ವರದಿ ವಾಚನ ಮಾಡಿದರು. ಖಜಾಂಜಿ ಶ್ರೀಯುತ ಗೋಪಾಲ ಚೆಟ್ಟಿಯಾರ್ ಲೆಕ್ಕಪತ್ರ ಮಂಡಿಸಿದರು. ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ಒಂದು ವರ್ಷದ ಸಿಂಹಾವಲೋಕನದಲ್ಲಿ ಮಹಾವಿದ್ಯಾಲಯ ಕಂಡ ಕಷ್ಟ ಸುಖಗಳನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಆದರ್ಶ ಎಂಬಂತೆ ಬೆಳೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
D.V. Sadananda Gowda Visited Nalanda College
D.V. Sadananda Gowda the Minister of Law and Justice in the Gvernment of India has visited Nalanda College of Perla.
Recruitement of Teaching Staff
DETAILS OF MINIMUM ELIGIBILITY AND OTHER INFORMATION FOR THE RECRUITEMENT OF TEACHING STAFF (As per guidelines of Vivekananda Vidyavardhaka Sangha Puttur) Minimum qualification for direct recruitement to the post of Professor, Associate Professor, Assistant Professor Qualification for teaching posts will be laid down by the Univesity Grant Commission ( UGC ) and as adopted by
ನಾಲಂದದಲ್ಲಿ ಮತದಾನದ ಬಗ್ಗೆ ಜಾಗೃತಿ
ಕೇರಳದಲ್ಲಿ 16 ಮೇ 2016 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ‘ಜಾಗೃತಿ’ಯನ್ನು ಮೂಡಿಸುವ ಉದ್ದೇಶದಿಂದ ಕಣ್ಣೂರು ವಿಶ್ವವಿದ್ಯಾಲಯದ ಆದೇಶದಂತೆ ಪೆರ್ಲ ನಾಲಂದ ಮಹಾವಿದ್ಯಾಲಯದ ಮುಂದಾಳತ್ವದಲ್ಲಿ ದಿನಾಂಕ 31 ಮಾರ್ಚ್ 2016 ರಂದು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ನಡೆಯಿತು. ಭಾರತೀಯ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಉಳ್ಳವರು, ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಜಾತಿ, ಮತ, ವರ್ಗ ಭೇದವಿಲ್ಲದೆ ಯಾವುದೇ ಆಮಿಷಗಳಿಗೊಳಗಾಗದೆ ಮೇ 16 ರಂದು ನಡೆಯವ ಚುನಾವಣೆಯಲ್ಲಿ ಮತವನ್ನು ಚಲಾಯಿಸುತ್ತೇವೆ ಎಂಬ ಪ್ರತಿಜ್ಞೆಗೆ ವಿದ್ಯಾರ್ಥಿ ಮತದಾರರು
ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶಿಕ್ಷಣ
ನಾಲಂದ ಕಾಲೇಜಲ್ಲಿ ’ಶ್ರೀಮಾತಾ’ ಆಡಳಿತ ಕಚೇರಿ ನೂತನ ಕಟ್ಟಡ ಉದ್ಘಾಟನೆ ಮೌಲ್ಯಾಧಾರಿತ ಶಿಕ್ಷಣ ಯಾವ ಸಂಸ್ಥೆಯಲ್ಲಿ ಸಿಗುತ್ತದೆಯೊ ಅಲ್ಲಿ ಉತ್ತಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ. ಕೇರಳ ಗಡಿ ಭಾಗದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ನಾಲಂದ ಸಂಸ್ಥೆಯಿದ್ದು ಮೌಲ್ಯಾಧಾರಿತ ಶಿಕ್ಷಣಕ್ಕೆ ಅಗತ್ಯ ಒತ್ತು ನೀಡುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವುದೆಂದರೆ ಅದೊಂದು ಸುಯೋಗ ಎಂದು ಕಣ್ಣೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ಅಬ್ದುಲ್ ಖಾದರ್ ಹೇಳಿದರು. ಅವರು ಪೆರ್ಲದ ನಾಲಂದ ಮಹಾವಿದ್ಯಾಲಯದ ಆಡಳಿತ ಕಚೇರಿಯ ನೂತನ
ಯಮದೂತನಾದ ಅರ್ಬುದ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ದಿನಾಂಕ 4 ಫೆಬ್ರವರಿಯಂದು ’ವಿಶ್ವ ಅರ್ಬುದ ದಿನ’ವನ್ನು ಆಚರಿಸಲಾಯಿತು. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ಇಂತಹ ಮಾರಕ ರೋಗಗಳು ಮಾನವನನ್ನು ಭಾದಿಸುತ್ತದೆ. ಇದರ ಬಗ್ಗೆ ನಾವು ಜಾಗೃತರಾಗಬೇಕು ಎಂದು ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯಾದ ಖದೀಜತ್ತುಲ್ ಬುಶ್ರ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆ ಮಾತನಾಡುತ್ತಾ ಮೊದಲ ಹಂತದಲ್ಲಿ ಅರ್ಬುದ ರೋಗ ಎಂದು ನಿರ್ಣಯಿಸಲು ಸಾಧ್ಯವಾದರೆ ಅದನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಬಹುದಾಗಿದೆ ಮತ್ತು
ಸುಖ ಜೀವನಕ್ಕೆ ತೇವ ಭರಿತ ಭೂಮಿ
ಪೆರ್ಲ : ನಾಲಂದ ಕಾಲೇಜಿನಲ್ಲಿ ಎನ್.ಎಸ್.ಎಸ್ ವತಿಯಿಂದ ಅಂತಾರಾಷ್ಟ್ರೀಯ ತೇವ ಭರಿತ ಭೂಪ್ರದೇಶ ದಿನ ವನ್ನು ಆಚರಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಕಾಲೇಜಿನ ಭೂಮಿಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಸಾಜಿದ ಸಿ.ಎಚ್ರವರು ತೇವ ಭರಿತ ಭೂಮಿಯ ಮಹತ್ವಗಳನ್ನು ತಿಳಿಸಿದ್ದಲ್ಲದೆ ಇಂದು ಅದನ್ನು ನಾಶ ಮಾಡುತ್ತಿದ್ದೇವೆ, ಅದರ ಸಂರಕ್ಷಣೆ ಮಾಡಿದರೆ ಮಾತ್ರ ನಮ್ಮ ಬದುಕು ಸುಖಮಯವಾಗಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕತೆ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆಯವರು ಎಲ್ಲಾ ಜೀವಿಗಳಿಗೂ ತೇವಭರಿತ ಭೂಪ್ರದೇಶ ಅತ್ಯಾವಶ್ಯಕ. ಅದನ್ನು ಯಾವುದೇ ರೀತಿಯಲ್ಲಿ ಹಾಳುಗೆಡಹದೆ ಸಂರಕ್ಷಿಸಿಕೊಂಡು