News & Events
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಸಮಾರೋಪ ಸಮಾರಂಭ ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಉದ್ಘಾಟಿಸಿ, ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ತಮಗೂ ದೇಶಕ್ಕೂ ಒಳಿತಾಗುತ್ತದೆ, ಈ ನಿಟ್ಟಿನಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕವು ನಿರ್ಮಿಸಿದ ಬೇಂಗಪದವು ಬಸ್ ತಂಗುದಾಣ, ಬೇಂಗಪದವು-ಬಾಂಕನ-ಸೊಮಾಜೆ-ದಾಸ್ರೋಕು ರಸ್ತೆ, ಬೇಂಗಪದವಿನಂದ ಶಾಲೆಗೆ ಬರುವ ಕಾಲುದಾರಿ
ಶ್ರಮದಾನ ಉದ್ಘಾಟನೆ
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬೇಂಗಪದವು ಶ್ರೀ ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಪ್ತ ದಿನ ವಿಶೇಷ ಶಿಬಿರದ ಶ್ರಮದಾನ ಕೆಲಸವನ್ನು ಎಣ್ಮಕಜೆ ಪಂಚಾಯತ್ತಿನ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀ ಉದಯ.ಬಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾಲಂದಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ಮೋಟ್ಟಕುಂಜ,ವಿನೀಷ, ಶಾಂಭವಿ, ಸ್ಥಳೀಯರಾದ ರಾಧಾಕೃಷ್ಣ ಆಳ್ವ ಪೂವನಡ್ಕ, ಅಬ್ದುಲ್ ಲತೀಫ್ ಬೇಂಗಪದವು, ರಾಮಣ್ಣ ಪೂಜಾರಿ ಬಾಂಕನ, ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ರಾಷ್ಟ್ರೀಯ
ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ – ಸೆಮಿನಾರ್
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬೇಂಗಪದವು ಶ್ರೀ ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಪ್ತ ದಿನ ವಿಶೇಷ ಶಿಬಿರದಲ್ಲಿ “ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ” ಎಂಬ ವಿಷಯದ ಕುರಿತು ಸೆಮಿನಾರ್ ನಡೆಯಿತು. ವಿಷ್ಣುಪ್ರಕಾಶ್ ಮುಳ್ಳೇರಿಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಗತಿಯನ್ನು ನಡೆಸಿಕೊಟ್ಟರು. ಕೇಂದ್ರ ಸರಕಾರದ ಯೋಜನೆಯಾದ ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿಯ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು. 500 ಮತ್ತು 1000 ಮುಖಬೆಲೆಯ ಅಪಮೌಲ್ವೀಕರಣದಿಂದ ಉದ್ಭವಿಸಿದ ಹಣದ ವಿನಿಮಯ ಮತ್ತು
ನಾಲಂದ ರಾಷ್ಟ್ರೀಯ ಸೇವಾ ಯೋಜನೆ ಸಪ್ತದಿನ ಶಿಬಿರ ಉದ್ಘಾಟನೆ
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರವು ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಉದ್ಘಾಟಿಸಿ ಇಂತಹ ಶಿಬಿರವು ಮಕ್ಕಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ವಿಕಸನ, ಸೇವಾಮನೊಭಾವ ಬೆಳೆಸಲು, ಸಹಬಾಳ್ವೆ ಮತ್ತು ಸಮಾಜಮುಖಿ ಅಬಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಣ್ಮಕಜೆ ಗ್ರಾಮ ಪಂಚಾಯತ್ತಿನ ಉಪಾಧ್ಯಕ್ಷರಾದ ಪುಟ್ಟಪ್ಪ
ಪೆರ್ಲ : ವಿವೇಕ ಉದ್ಯೋಗ ಮೇಳ ಕೌಂಟರ್ ಉದ್ಘಾಟನೆ
ಪೆರ್ಲ : 13 ಜನವರಿ 2017 ರಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯಾದ ಆವರಣದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಆಯೋಜಿಸಿರುವ ಬೃಹತ್ ವಿವೇಕ ಉದ್ಯೋಗ ಮೇಳಕ್ಕೆ ಪೂರಕವಾಗಿ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ನಾಲಂದ ಕಾಲೇಜಿನಲ್ಲಿ ಕಾರ್ಯಾಲಯ ಉದ್ಘಾಟನೆಗೊಂಡಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕಾರ್ಯಾಲಯವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧಿಕಾರಿ ವಿವೇಕ ಭಂಡಾರಿ ಉದ್ಯೋಗ ಮೇಳದ ಮಾಹಿತಿ ನೀಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಕೆ ಕಮಲಾಕ್ಷ ಪ್ರಾಸ್ತಾವಿಕ
ವಿಶ್ವ ಏಡ್ಸ್ ದಿನಾಚರಣೆ
ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಮತ್ತು ರೆಡ್ರಿಬ್ಬನ್ ಕ್ಲಬ್ವತಿಯಿಂದ ವಿಶ್ವಎಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಜನಜಾಗೃತಿ ರ್ಯಾಲಿ ಕಾಲೇಜಿನ ಪರಿಸರದಿಂದ ಪ್ರಾರಂಭಗೊಂಡು ಪೆರ್ಲ ಪೇಟೆಯಲ್ಲಿ ಸಮಾರೋಪಗೊಂಡಿತು. ಎಡ್ಸ್ ವಿರುದ್ಧ ಜನಜಾಗೃತಿ ರ್ಯಾಲಿಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ಶಿವಕುಮಾರ್ ಉದ್ಘಾಟಿಸಿ ವಿದೇಶಿ ಸಂಸ್ಕೃತಿಯನ್ನು ಅನುಸರಿಸಿದ ಪರಿಣಾಮವಾಗಿ ಈ ಮಾರಕರೋಗ ಹರಡಲು ಕಾರಣವಾಯಿತು. ಈ ರೋಗದ ವಿರುದ್ದ ಜನಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ರ್ಯಾಲಿಯು ಸ್ತುತ್ಯಾರ್ಹವಾಗಿದೆ ಎಂದರು. ಎಣ್ಮಕಜೆ ಪಂಚಾಯತು ಅಧ್ಯಕ್ಷೆಯಾದ ಶ್ರೀಮತಿ ರೂಪವಾಣಿ
ಅಂಗನವಾಡಿ ಪರಿಸರ ಶುಚಿತ್ವ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ಎಣ್ಮಕಜೆ ಪಂಚಾಯತಿಗೆ ಒಳಪಟ್ಟ ಬೇಂಗಪದವು ಅಂಗನವಾಡಿ ಪರಿಸರವನ್ನು ಶುಚಿಗೊಳಿಸಲಾಯಿತು. ಈ ಕಾಯಕ್ರಮವನ್ನು ವಾರ್ಡು ಸದಸ್ಯರಾದ ಮೊಹಮ್ಮದ್ ಹನೀಫ್ ನಡುಬೈಲು ಅವರು ಉದ್ಘಾಟಿಸಿ ಎನ್ಎಸ್ಎಸ್ನಂತಹ ವಿದ್ಯಾರ್ಥಿ ಸಂಘಟನೆಗಳು ಪರಿಸರ ಸಂರಕ್ಷಣೆ ಹಾಗು ಶುಚಿತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯ ಮತ್ತು ಸ್ವಾಗತಾರ್ಹ ಎಂದು ಹೇಳಿದರು. ಅತ್ಯಂತ ಎಳೆಯ ವಯಸ್ಸಿನಲ್ಲೇ ಪರಿಸರ ಪ್ರೇಮ, ಪರಿಸರದ ಬಗೆಗಿನ ಕಾಳಜಿ ಸೃಷ್ಟಿಸುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಮಮತಾ ಅವರು ಅಭಿಪ್ರಾಯಪಟ್ಟರು.
ಮಕ್ಕಳ ದಿನಾಚರಣೆ
ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿಎನ್ಎಸ್ಎಸ್ ವತಿಯಿಂದಮಕ್ಕಳ ದಿನಾಚರಣೆಯನ್ನುಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಧನ್ಯ ಕೆ.ಪಿ ವಹಿಸಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲು ಅವರಿಗೆ ಮಕ್ಕಳಲ್ಲಿದ್ದ ಪ್ರೀತಿಯೆ ಕಾರಣ ಎಂದು ಹೇಳಿದರು. ಬಾಲಕಾರ್ಮಿಕತ್ವದ ನಿರ್ಮೂಲನೆ, ಬಾಲಾಪರಾದ, ಮೊದಲಾದ ಕೆಟ್ಟಪಧ್ದತಿಗಳನ್ನು ಹೋಗಲಾಡಿಸಿ ಮಕ್ಕಳ ಭವಿಷ್ಯವನ್ನು ಸುದೃಢಗೊಳಿಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅಥಿತಿಯಾದ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಅರ್ಪಿತಾ ಅವರು
ಅಂತಾರಾಷ್ಟ್ರೀಯ ಏಕತಾದಿನ
ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯಿ ಪಟೇಲ್ರವರ ಮಹಾನ್ ಕೊಡುಗೆಗಳನ್ನೂ ನೇತೃತ್ವ ಗುಣಗಳನ್ನೂ ಸ್ವಾತಂತ್ರ್ಯಾ ನಂತರದ ಭಾರತೀಯರೆಲ್ಲ ಸದಾ ಸ್ಮರಿಸಬೇಕು. ಅವರ ರೂಪ ಮತ್ತು ಮುಖ ಭಾವವು ಶಾಂತ ರೀತಿಯಲ್ಲಿದ್ದರೂ ಅವರ ಮನೋದಾರ್ಢ್ಯವು ಉಕ್ಕಿನಂತಹದಾಗಿತ್ತು ಎಂಬುದು ಸರ್ವವಿದಿತ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಮಲಯಾಳಂ ಉಪನ್ಯಾಸಕಿ ವಿನೀಶ ಅವರು ಅಭಿಪ್ರಾಯಪಟ್ಟರು. ಸದ್ರಿ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ನಡೆದ ಅಂತಾರಾಷ್ಟೀಯ ಏಕತಾ ದಿನವನ್ನು ಆಚರಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು.ಗೀತಾ ಪಿ ಅವರು
ನಾಲಂದ ರಕ್ತದಾನ ಶಿಬಿರ
ನಾಲಂದ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ರಕ್ತದಾನ ಶಿಬಿರವು ತಾರೀಕು 20-10-2016 ರಂದು ಕಾಲೇಜಿನಲ್ಲಿ ನಡೆಯಿತು. ಸುಮಾರು 50 ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಪ್ರಾಧ್ಯಾಪಕರಾದ, ಶ್ರೀನಿಧಿ, ಕುಮಾರಿ ಶಿಲ್ಪಾ ಮೊದಲಾದವರು ರಕ್ತದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ . ಕಮಾಲಾಕ್ಷ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ , ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ, ಶಿಬಿರದಲ್ಲಿ ಪಾಲ್ಗೊಂಡಿದ್ದರು. ಎನ್. ಎಸ್.ಎಸ್ ಕಾರ್ಯದರ್ಶಿಗಳಾದ ವಿಕಾಸ್, ಭವಿಷ್ಯ, ಸುಧಾಕರ ಹಾಗೂ ವಿದ್ಯಾರ್ಥಿಗಳಾದ ಸೆರಿನಾ, ಅಭಿಲಾಷ್,