News & Events
ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಭೇಟಿ
ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ್ರವರು ದಿನಾಂಕ 23-09-2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಉಪನ್ಯಾಸಕ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರು ಆದರೆ ಪ್ರತಿಭೆಯನ್ನು ಎಲ್ಲಿ, ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ಮಾರ್ಗದರ್ಶನದ ಕೊರತೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ವ್ಯಕ್ತಿಗತ ಜೀವನ ವಿಕಾಸಕ್ಕೆ ಅನುಕೂಲವಾಗುವ ರೀತಿಯ ವಿಷಯಗಳನ್ನು ತಿಳಿಸಿ ಅವರನ್ನು ಸರಿಯಾದ ದಾರಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ನಮ್ಮಲ್ಲಿದೆ. ಆದುದರಿಂದ ನಾವು ಬೆಳೆಯಬೇಕು ಅವರನ್ನು
ನಾಲಂದದಲ್ಲಿ ಓಣಂ ಆಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಅಂದು ನಡೆದ ಸಭಾ ಕಾರ್ಯಕ್ರಮದಲ್ಲಿ ನಾಯಮ್ಮಾರಮೂಲೆ ಟಿ.ಐ.ಎಚ್.ಎಸ್ ಶಾಲೆಯ ಗಣಿತ ಅಧ್ಯಾಪಕ ಸತೀಶನ್ ಕೆ. ಯವರು ಮುಖ್ಯ ಅತಿಥಿಗಳಾಗಿದ್ದರು. ಓಣಂ ನಾಡಹಬ್ಬ ಮಾತ್ರವಲ್ಲದೆ ಕೃಷಿಕರ ಉತ್ಸವವಾಗಿದೆ. ಸಮಾನತೆ ಮತ್ತು ಸಹೋದರತ್ವವನ್ನು ಉಳಿಸಿ ಬೆಳೆಸುವ ಹಬ್ಬವೇ ಓಣಂ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷರು ಅಧ್ಯಕ್ಷತೆ ವಹಿಸಿ ಓಣಂನ ವಿಶೇಷತೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜು ಆಡಳಿತ ಮಂಡಳಿಯ
ಜಯರಾಮ ಅವರಿಂದ ಯೋಗ ಪ್ರಾತ್ಯಕ್ಷಿಕೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ತರಗತಿಯ ಸಂಯೋಜಕರು ಆದ ಯೋಗಗುರು ಬಿ. ಜಯರಾಮ ಅವರು ಇತ್ತೀಚೆಗೆ ಯೋಗದ ಪ್ರಾತ್ಯಕ್ಷಿಕೆಯನ್ನು ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಈ ತರಗತಿ ನಡೆಯಿತು. ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಗ ಮನುಷ್ಯನ ಶಾರೀರಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಸಹಕರಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಯೋಗ ಗುರುಗಳು ಒಂದು ದಿನದ ಯೋಗ ಪ್ರಾತ್ಯಕ್ಷಿಕೆಯನ್ನು ವಿವಿಧ ತರಗಳ ವಿದ್ಯಾರ್ಥಿ ಬಳಗಕ್ಕೆ
ಶಿಕ್ಷಕರ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಮದರಾಸು ಪ್ರೆಸಿಡೆನ್ಸಿ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಚಾರ್ಯ ಡಾ| ಮಹಾಲಿಂಗ ಭಟ್ಟ ಕಾನತ್ತಿಲರವರನ್ನು ಗೌರವಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ತಮ್ಮನ್ನು ಗೌರವಿಸಿದ್ದಕ್ಕೆ ಕೃತಜ್ಙತೆ ಸಲ್ಲಿಸಿ ಮಾತನಾಡಿದ ಡಾ| ಮಹಾಲಿಂಗ ಭಟ್ ಶಿಕ್ಷಣದ ಮೂಲಕ ಉತ್ತಮ ಸಂಸ್ಕಾರ ಮೂಡುತ್ತದೆ. ವೇದಾಂತ, ತತ್ವ ಶಾಸ್ತ್ರಗಳು ಧರ್ಮಸಮನ್ವಯ ಮತ್ತು ಸಹಿಷ್ಣುತೆಯನ್ನು ಬೋಧಿಸುತ್ತವೆ. ಇವೆರಡನ್ನು ಮೈಗೂಡಿಸಿಕೊಂಡರೆ ನಾಡು ಉತ್ತಮಗೊಳ್ಳುವುದರಲ್ಲಿ ಸಂಶಯಬೇಡ ಎಂದರು. ಡಾ| ಸರ್ವಪಳ್ಳಿ ರಾಧಾಕೃಷ್ಣನ್ರವರ ಆದರ್ಶ ಮತ್ತು ವ್ಯಕ್ತಿತ್ವಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಕಾಲೇಜಿನ
ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು – ನಾಲಂದದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಕೃಷಿಕನೇ ಭಾರತದ ಬೆನ್ನೆಲುಬು. ಆದರೆ ಇಂದು ಭಾರತದಲ್ಲಿ ಜನಸಂಖ್ಯೆಯ ಕ್ಷಿಪ್ರ ಬೆಳವಣಿಗೆಯಾಗುತ್ತದೆ. ಅದಕ್ಕೆ ಅನುಸರಿಸಿ ಕೃಷಿಯೂ ಬೆಳವಣಿಗೆ ಹೊಂದಬೇಕಾದದ್ದು ಅನಿವಾರ್ಯ. ಕೃಷಿ ಅಭಿವೃದ್ದಿಯಾಗದಿದ್ದರೆ ಮುಂದೆ ದೇಶ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಕಾಸರಗೋಡು ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ. ಪಿ.ಚೌಡಪ್ಪನವರು ಅಭಿಪ್ರಾಯಪಟ್ಟರು. ಅವರು ಪೆರ್ಲ ನಾಲಂದ ಕಾಲೇಜಿನಲ್ಲಿ (27-08-2016 ರಂದು) ನಡೆದ ’ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾದ್ಯತೆಗಳು’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಸಂಖ್ಯೆಯನ್ನು ಆಧರಿಸಿಕೊಂಡು ಆಹಾರ ಉತ್ಪಾದಿಸಲು ಸಾಧ್ಯವಿಲ್ಲ.
ನಾಲಂದ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ದೇಶದ 70 ನೇ ಸ್ವಾತಂತ್ರ್ಯ ದಿನವನ್ನು ಕವಿ, ಸಾಹಿತಿ ಹಾಗೂ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ವಾಸುದೇವ ಭಟ್ರವರು ಧ್ವಜಾರೋಹಣವನ್ನು ಮಾಡುವುದರ ಮೂಲಕ ಆಚರಿಸಲಾಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ವಾಸುದೇವ ಭಟ್ರವರು ಮಾತನಾಡುತ್ತ ಭಾರತಮಾತೆಯ ಮಕ್ಕಳಾದ ನಾವು ಈ ಮಣ್ಣು, ಈ ನಾಡು ನಮ್ಮದು ಎಂದು ಪ್ರೀತಿಸಿ ರಕ್ಷಿಸಿಕೊಂಡು ಬಂದರೆ ಮಾತ್ರ ಭಾರತ ಎಲ್ಲ ಕ್ಷೇತ್ರಗಳಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯ ಎಂದರು.
ನಾಲಂದದಲ್ಲಿ ವಿಚಾರಸಂಕಿರಣ
ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಆದೇಶದಂತೆ ಪೆರ್ಲ ನಾಲಂದ ಮಹಾವಿದ್ಯಾನಿಲಯದ ಎನ್. ಎಸ್. ಎಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ’ಯುವಜನಾಂಗದಿಂದ ಸುಸ್ಥಿರ ಬಡತನ ನಿರ್ಮೂಲನೆ, ಉಪಯೋಗ ಮತ್ತು ಉತ್ಪಾದನೆ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಆಗಸ್ಟ್ 12 ರಂದು ನಡೆಯಿತು. ದಾರಿದ್ರ್ಯವನ್ನು ಹೋಗಲಾಡಿಸಲು ಯುವಜನತೆ ಉದ್ಯೋಗಗಳಿಸುವಲ್ಲಿ ತಮ್ಮ ಸತತ ಪ್ರಯತ್ನದಿಂದ ಸಫಲರಾಗಬೇಕು, ಬ್ಯಾಂಕಿಂಗ್, ಕೈಗಾರಿಕೆ, ಕೃಷಿ ಮೊದಲಾದ ವಲಯಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶವಿದ್ದು ಯುವಜನತೆ ಸ್ಪರ್ಧಾತ್ಮಕವಾಗಿ ಆಧುನಿಕ ತಂತ್ರಜ್ಞಾನ ಮಾಹಿತಿಗಳೊಂದಿಗೆ ಉದ್ಯೋಗಳಿಸಬೇಕು.
ಬ್ಯಾಂಕಿಂಗ್ನ ಪ್ರಚಲಿತ ವಿದ್ಯಮಾನಗಳು – ವಿಚಾರ ಸಂಕಿರಣ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಬಾರ್ಡ್ನ ವತಿಯಲ್ಲಿ ‘ಬ್ಯಾಂಕಿಂಗ್ನ ಪ್ರಚಲಿತ ವಿದ್ಯಮಾನಗಳು’ ಎಂಬ ವಿಷಯದ ಕುರಿತು 8 ಆಗಸ್ಟ್ 2016 ರಂದು ವಿಚಾರ ಸಂಕಿರಣ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಬಾರ್ಡ್ನ ಪಿ.ಎ.ಸಿ.ಯಸ್ ಡೆವಲಪ್ಮೆಂಟ್ ಸೆಲ್ನ ಶ್ರೀ ಕೆ.ನಾರಾಯಣ ಮತ್ತು ಶ್ರೀ ಸೌಜಿತ್ ಆಂಟನಿಯವರು ಭಾಗವಹಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ|ಕೆ. ಕಮಲಾಕ್ಷರು ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಸಮಪನ್ಮೂಲ ವ್ಯಕ್ತಿಗಳು ’ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್, ಇ-ಫಂಡ್ ಟ್ರಾನ್ಸ್ಫರ್, ಐ.ಎಫ್.ಎಸ್.ಸಿ ಮೊದಲಾದ ವ್ಯವಸ್ಥೆಗಳ ಸಾಧಕ-ಭಾದಕಗಳ
ನಾಲಂದದಲ್ಲಿ ಎನ್.ಎಸ್.ಎಸ್. ಸೆಮಿನಾರ್
ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಗತಿ ನಡೆಸಿಕೊಡಲಾಯಿತು. ಮುನ್ನಾಡ್ ಪೀಪಲ್ಸ್ ಕೋ-ಆಪರೇಟಿವ್ ಕಾಲೇಜಿನ ಮೇನೇಜೆಮೆಂಟ್ ವಿಭಾಗದ ಮುಖ್ಯಸ್ಥ ಶ್ರೀ ಪುಷ್ಪಾಕರ ಬೆಂಡಿಚ್ಚಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಮಾಜಸೇವೆ ಎಂಬುದು ಮನುಷ್ಯನ ಅಂತರಾಳದಿಂದ ಉದಿಸಿ ಬರಬೇಕೆ ಹೊರತು ಅದು ಒತ್ತಾಯದಿಂದ ಬರಬಾರದು. ಆಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಸಮಾಜ ಸೇವಕನಾಗುತ್ತಾನೆ. ಪಾಶ್ಚಾತ್ಯ ಪ್ರಭಾವದಿಂದ ಮಾನವನಲ್ಲಿ ಸ್ವಾರ್ಥ ಹೆಚ್ಚುತ್ತಿದೆ ಮಾತ್ರವಲ್ಲದೆ ವೃಷ್ಠಿ ಚಿಂತೆಯೇ ಹೊರತು ಸಮಷ್ಠಿಯ ಚಿಂತನೆ ಇಲ್ಲವಾಗುವ ಈ ಕಾಲಘಟ್ಟದಲ್ಲಿ
ಅಂತಾರಾಷ್ಟ್ರೀಯ ಕಾಂಡ್ಲ ಕಾಡು ದಿನ
ಪೆರ್ಲ ನಾಲಂದ ಮಹಾವಿದ್ಯಾಲಯದ ಭೂಮಿತ್ರ ಸೇನಾ ಕ್ಲಬ್ ಮತ್ತು ಗೇಲಕ್ಷಿ ಕ್ಲಬ್ಗಳು ಜಂಟಿಯಾಗಿ ‘ಅಂತಾರಾಷ್ಟ್ರೀಯ ಕಾಂಡ್ಲ ಕಾಡು ದಿನ’ವನ್ನು ಆಚರಿಸಿತು. ಅಂತಿಮ ಬಿ.ಎಸ್ಸಿಯ ಮಾಕ್ಸಿಂ ರೋಡ್ರೀಗಸ್ ರವರು ಕಾಂಡ್ಲ ಸಸ್ಯಗಳು ಸಮುದ್ರದ ದಡದಲ್ಲಿ ಬೆಳೆಯುವ ಒಂದು ಜಾತಿಯ ಸಸ್ಯ. ಇದರ ಬೀಜಗಳು ನೀರು ಇಳಿದಿರುವ ಸಮಯ ನೋಡಿ ಮರಳಿನಲ್ಲಿ ಬೇರು ಬಿಟ್ಟು ಹುಲುಸಾಗಿ ಬೆಳೆಯುತ್ತವೆ. ಇದು ಚಂಡಮಾರುತ ಮತ್ತು ಸಮುದ್ರ ಕೊರೆತಗಳನ್ನು ತಡೆಗಟ್ಟಲು ಅನುಕೂಲವಾಗಿದೆ. ಜಲಚರಗಳ ವಂಶಾಭಿವೃದ್ಧಿಗೂ ಸಹಾಯಕವಾಗಿದೆ. ಇಂಡೋನೇಷ್ಯಾ, ಅಂಡಮಾನ್ ನಿಕೋಬಾರ್ ಮುಂತಾದ ದೇಶಗಳ ತೀರ