×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ರಾಗಿಂಗ್ ವಿರುದ್ಧ ಜಾಗೃತಿ

ನಾಲಂದ ಕಾಲೇಜಿನ ಎನ್. ಎಸ್. ಎಸ್ ಘಟಕದ ಸಹಯೋಗದಲ್ಲಿ ರಾಗಿಂಗ್‌ನ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಕೆ.ಆರ್ ಅಂಬಾಡಿಯವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಬಾಡಿಯವರು ಮಾತನಾಡುತ್ತಾ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿದರೆ ಅದು ರಾಗಿಂಗ್ ಮಾಡಿದಂತಾಗುತ್ತದೆ ಅದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಆದುದರಿಂದ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕಲಿತು ಉತ್ತಮ ಪ್ರಜೆಗಳಾಗಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸೀನಿಯರ್ ಪೋಲಿಸ್ ಅಧಿಕಾರಿ

Read More

’ವಿದ್ಯಾಸಿಂಧು’ ದತ್ತಿನಿಧಿಗೆ ಚೆಕ್ ಸಮರ್ಪಣೆ

ನಾಲಂದ ಮಹಾವಿದ್ಯಲಯದ ಪ್ರಥಮ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಲ್ಲಿ ಗರಿಷ್ಠ ಸಾಧನೆ ಮಾಡಿದವರಿಗೆ ಕೊಡಮಾಡುವ ’ವಿದ್ಯಾಸಿಂಧು’ ಹೆಸರಿನಲ್ಲಿ ದತ್ತಿನಿಧಿಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಬಿಎಸ್ಸಿ ಜಿಯಾಗ್ರಫಿ ವಿಭಾಗಕ್ಕೆ ದಿ| ಸೋಮಜೆ ಮಹಾಲಿಂಗ ಭಟ್ಟ ಅವರ ಹೆಸರಿನಲ್ಲಿ ಸ್ಥಾಪಿಸಲಾದ ದತ್ತಿನಿಧಿಗೆ ಮಕ್ಕಳಾದ ಶ್ರೀ ಗೋವಿಂದರಾಜ ಮತ್ತು ಸಹೋದರರು 1,50,000 ರೂಪಾಯಿಗಳ ಚೆಕ್‌ನ್ನು ನಾಲಂದದ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಶಿವಕುಮಾರ್ ಅವರಿಗೆ ಸಮರ್ಪಿಸಿದರು. ಸೋಮಜೆ ಶ್ರೀ ಗೋವಿಂದರಾಜರ ಮನೆಯಲ್ಲಿ ನಡೆದ ಈ ಸಮರ್ಪಣಾ ಸಮಯದಲ್ಲಿ ಆಡಳಿತ ಸಮಿತಿಯ ಸದಸ್ಯ ಶ್ರೀ ಶಂ.ನಾ.ಖಂಡಿಗೆ ಹಾಜರಿದ್ದು

Read More

ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ವಿಧಾನ ಎಂಬ ವಿಷಯದ ಬಗ್ಗೆ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಹೃಷಿಕೇಶ್ ಮಾತನಾಡುತ್ತಾ, ನಮ್ಮ ಪರಿಸರ ಕಲುಷಿತಗೊಂಡಾಗ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಸಾಂಕ್ರಾಮಿಕ ರೋಗಗಳು ಹರಡುವುದು ಮುಖ್ಯವಾಗಿ ಸೊಳ್ಳೆಗಳಿಂದ. ಸಂಧ್ಯಾ ಸಮಯದಲ್ಲಿ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೊ ಜ್ವರ ಹರಡುತ್ತದೆ. ಅದೇ ರೀತಿ ಎಚ್1ಎನ್1 ಮಲೇರಿಯಾ ಮೊದಲಾದ ರೋಗಗಳು ಬಾರದಂತೆ ತಡೆಗಟ್ಟಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು. ನಮ್ಮ ಆರೋಗ್ಯ ನಮ್ಮ ಕೈಯಲೇ ಇದೆ ಎಂದು ರೋಗ ತಡೆಗಟ್ಟುವ ವಿಧಾನಗಳನ್ನು

Read More

ಮಾದಕ ವ್ಯಸನ ವಿರೋಧಿ ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಮಾದಕ ವ್ಯಸನ ವಿರೋಧಿ ದಿನವನ್ನು ಉತ್ತಮ ಕಾರ್ಯಕ್ರಮದೊಂದಿಗೆ ಆಯೋಜಿಸಲಾಯಿತು. ಕಾಲೇಜು ಉಪನ್ಯಾಸಕ ಕೆ.ಕೇಶವಶರ್ಮರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮನುಷ್ಯ ಅಮಲು ಪದಾರ್ಥಗಳ ಬಳಕೆಯಿಂದ ಬುದ್ಧಿ ಸ್ವಾಸ್ಥ್ಯ ಕಳೆದು ಮೃಗವಾಗುತ್ತಾನೆ. ಮನಸ್ಸು ಶುದ್ದವಿದ್ದರೆ ನಾವು ಮತ್ತು ನಮ್ಮ ಪರಿಸರ ಶುದ್ದವಾಗಿರುತ್ತದೆ. ಮಾನವರಾದ ನಾವು ಶುದ್ದರಾಗಿ ನಮ್ಮಿಂದ ಲೋಕಪರಿಶುದ್ದಗೊಂಡು ಮಾದಕ ಮುಕ್ತ ಭಾರತ ನಿರ್ಮಾಣವಾಗಬೇಕು. ಇಂದು ಯುವ ಜನಾಂಗ ಶೋಕೀ ಜೀವನಕ್ಕೆ ಮರುಳಾಗಿ ಮಾದಕ ದ್ರವ್ಯಗಳ ದಾಸರಾಗಿರುವುದು ಸಾಮಾನ್ಯವಾಗಿದೆ. ಅದು ಮೊದಮೊದಲು

Read More

ನಾಲಂದದಲ್ಲಿ ವಿಶ್ವಯೋಗ ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಎನ್. ಎಸ್. ಎಸ್ ಘಟಕದ ಸಹಯೋಗದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ನಾಲಂದ ಆಡಳಿತಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಉಕ್ಕಿನಡ್ಕ ಮಾತನಾಡುತ್ತ ಯೋಗ ಎಂಬುದು ಒಂದು ಮತೀಯ ಚಿಂತನೆಯಲ್ಲ ಅದೊಂದು ಧರ್ಮ. ಮಾನವ ತನ್ನ ಜೀವನದಲ್ಲಿ ಒಂದು ಗುರಿಯನ್ನು ಸಾಧಿಸಲು ಯೋಗ ಅಗತ್ಯ. ಅದನ್ನು ಅಭ್ಯಾಸ ಮಾಡಿದರೆ ಮನಸ್ಸು ಶುದ್ಧವಾಗುತ್ತದೆ. ಜೀವನ ಸಾರ್ಥಕಗೊಳ್ಳುತ್ತದೆ, ರೋಗ ದೂರವಾಗುತ್ತದೆ ಎಂದು ನುಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ

Read More

ನಾಲಂದದಲ್ಲಿ ರಕ್ತದಾನಿಗಳ ದಿನ

ನಾಲಂದ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬಿನ ನೇತೃತ್ವದಲ್ಲಿ ವಿಶ್ವರಕ್ತದಾನಿಗಳ ದಿನವನ್ನು ಆಚರಿಸಲಾಯಿತು. ರಕ್ತದಾನದ ಮಹತ್ವ ಹಾಗೂ ಈ ವರ್ಷದ ದ್ಯೇಯವಾಕ್ಯವಾದ “ರಕ್ತ ಕೊಡು, ಈಗ ಕೊಡು, ಆಗಾಗ ಕೊಡು” ಎಂಬುದರ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ರಕ್ತದಾನ ಮಹಾದಾನ ಮಾತ್ರವಲ್ಲ ಅನ್ನದಾನಕ್ಕಿಂತಲೂ ಶ್ರೇಷ್ಟ ಹಾಗೂ ರಕ್ತದಾನದ ಮೂಲಕ ಒಂದು ಜೀವ ಉಳಿಸುವ ಮಹತ್ಕಾರ್ಯ ಸಾಧಿಸಬಹುದು, ರಕ್ತದಾನ ಮಾಡುವುದರಲ್ಲಿ ಕೊಡುವವನಿಗೂ ಹಾಗು ಪಡೆಯುವವನಿಗೂ ಪ್ರಯೋಜನವಿದೆ ಎಂದು ಕನ್ನಡ ವಿಭಾಗದ ಉಪನ್ಯಾಸಕರಾದ ಕೇಶವ

Read More

ನಾಲಂದದಲ್ಲಿ ವಿಶ್ವ ಪರಿಸರ ದಿನ

ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕ ಮತ್ತು ಭೂಮಿತ್ರಾ ಸೇನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ | ಶಂಕರನಾರಾಯಣ ಹೊಳ್ಳ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪರಿಸರವನ್ನು ಪ್ರೀತಿಸಿ, ಪರಿಸರದ ಬಗ್ಗೆ ಸದಾ ಕಾಳಜಿವಹಿಸಬೇಕು ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕ ನಿರ್ಮಿಸಿದ ಬೇಂಗಪದವು-ದಾಸ್ರೋಕ್ ರಸ್ತೆಯ ಬದಿಗಳಲ್ಲಿ ಹೆಚ್ಚಿನ ಸಂಖೆಯಲ್ಲಿ ಸಸಿಗಳನ್ನು

Read More

ಯಕ್ಷಗಾನದಲ್ಲಿ ನಾಲಂದಕ್ಕೆ ’ಎ’ ಗ್ರೇಡ್

ಕಣ್ಣೂರು ವಿಶ್ವವಿದ್ಯಾನಿಲಯದ 2016-17 ೭ನೇ ವರ್ಷದ ಕಲೋತ್ಸವವು ಇತ್ತೀಚೆಗೆ ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜು, ಪೊವ್ವಲ್‌ನಲ್ಲಿ ನಡೆಯಿತು. ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವಿಕಾಸ್ (ದೇವೇಂದ್ರ), ಪ್ರಜ್ಞಾ(ಅಗ್ನಿ), ಗಿರೀಶ್ (ವರುಣ), ಅರ್ಪಿತ್(ನರಕಾಸುರ), ಅಭಿಲಾಷ್(ಮುರಾಸುರ), ನಿರಂಜನ್ ಬಲ್ಲುಲಾಯ(ಕೃಷ್ಣ), ಸಾಗರ್(ಸತ್ಯಭಾಮ), ಶರತ್ ಕುಮಾರ್ ಮತ್ತು ಶರ್ಮಿತಾ (ದೂತರು), ಇವರು ’ನರಕಾಸುರ ಮೋಕ್ಷ’ ಎಂಬ ಕಥಾಭಾಗವನ್ನು ಆಡಿ ತೋರಿಸಿ ಜನಮೆಚ್ಚುಗೆಗೆ ಪಾತ್ರರಾದರು. ಇವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.

Read More

ಸಸ್ಯ ಸಂಪತ್ತನ್ನು ವೃದ್ಧಿಸಿ, ಜಲಸಂರಕ್ಷಣೆಯತ್ತ ಮುನ್ನಡೆಯಬೇಕು : ಶ್ರೀ ಪಡ್ರೆ

ಜೀವಜಲ ಕಿರುಚಿತ್ರ ಬಿಡುಗಡೆ ಪೆರ್ಲ: ನಾಲಂದ ಮಹಾವಿದ್ಯಾಲಯದ ಪರಿಸರ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವ ಕಿರುಚಿತ್ರ ಜೀವಜಲವನ್ನು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದ ಪತ್ರಕರ್ತ, ಶ್ರೀಪಡ್ರೆ ಬಿಡುಗಡೆಗೊಳಿಸಿದರು. ಜೀವಜಲ ಕಿರುಚಿತ್ರದ ತಂಡವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಸ್ಯ ಸಂಪತ್ತನ್ನು ವೃದ್ಧಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯಾರ್ಥೀಗಳಿಗೆ ಕರೆ ನೀಡಿದರು. ಅತ್ಯಂತ ಹೆಚ್ಚು ಮಳೆ ಲಭಿಸುವ ನಮ್ಮ ಕರಾವಳಿ ಪ್ರದೇಶವನ್ನೇ ಬರಪೀಡಿತ ಪ್ರದೇಶವಾಗಿ ಗುರುತಿಸಲಾಗಿದೆ ಎಂದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯ ತೀವ್ರತೆ ಎಷ್ಟರಮಟ್ಟಿಗಿರಬಹುದು ಎಂದು ಗಂಭಿರವಾಗಿ ಆಲೋಚಿಸಬೇಕಾಗಿದೆ

Read More

ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ

ಮಾದಕ ವಸ್ತುಗಳ ಸೇವನೆಯ ವಿರುದ್ಧ ಜನಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಮತ್ತು ಅಬಕಾರಿ ಇಲಾಖೆಯ ಸಹಯೋಗದಲ್ಲಿ ಮಾರ್ಚ್ 28 ರಂದು ಯುವ ಜನಾಂಗ ಮತ್ತು ಮಾದಕ ವಸ್ತುಗಳು ಎಂಬ ವಿಷಯದ ಮೇಲೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ನಾರಾಯಣ ಪ್ರದೀಪ್‌ರವರು ಕ್ಲಾಸು ನಡೆಸಿಕೊಟ್ಟರು. ಶ್ರಮ ಜೀವಿಗಳು ದೈಹಿಕ ಶ್ರಮವನ್ನು ಮರೆಯುವುದಕ್ಕಾಗಿ ಗಂಡು ಹೆಣ್ಣು ಭೇದವಿಲ್ಲದೆ ಕ್ಷಣಿಕ ಸುಖಕ್ಕೆ ಬಲಿಯಾಗಿ ಕೊನೆಗೆ ಮಾದಕ ವಸ್ತುಗಳ ದಾಸರಾಗುತ್ತಾರೆ. ಯುವಜನಾಂಗ ಶೋಕಿಜೀವನಕ್ಕೆ ತೊಡಗಿ ಅನಂತರ ಅದುವೇ

Read More