News & Events
ಅಂತರಾಷ್ಟ್ರೀಯ ಕಿಡ್ನಿ ದಿನಾಚರಣೆ
ನಾಲಂದ ಮಹಾವಿದ್ಯಾಲಯದ ಎನ್.ಯಸ್.ಯಸ್ ವತಿಯಿಂದ ಅಂತರಾಷ್ಟ್ರೀಯ ಕಿಡ್ನಿ ದಿನಾಚರಣೆಯನ್ನು ಆಚರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾದ ಮಾಲಿನಿಯವರು ಮಾನವನ ಅಂಗಾಗಳಲ್ಲಿ ಕಿಡ್ನಿಯು ಬಹಳ ಪ್ರಧಾನವಾದದ್ದು . ಕಿಡ್ನಿಯ ಬಗ್ಗೆ ಜಾಗತಿಕಮಟ್ಟದಲ್ಲಿ ತಿಳುವಳಿಕೆ ಮೂಡಿಸಬೇಕು ಮತ್ತು ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಬಾರದಂತೆ ಎಚ್ಚರವಹಿಸಬೇಕು. ರಕ್ತದ ಒತ್ತಡ ತಡೆಯಬೇಕು, ಧೂಮಪಾನ ಮಾಡಬಾರದು, ಅತಿಯಾಗಿ ಸಿಹಿಸೇವನೆ ಮಾಡಬಾರದು. ಶರೀರದ ತೂಕವನ್ನು ಸಮತೋಲನದಲ್ಲಡಬೇಕು ವೈದ್ಯರ ತಪಾಸಣೆ ಮೂಲಕವೇ ಔಷಧಿ ಪಡೆಯಬೇಕು. ಎಂದು ಹೇಳಿದರು. ಎನ್.ಎಸ್. ಎಸ್. ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆ ಅವರು ತಮ್ಮ ಅಧ್ಯಕ್ಷೀಯ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ನಾಲಂದ ಕಾಲೇಜಿನ ಎನ್.ಎಸ್.ಎಸ್ನ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಆಯಿಷಾ ಎ.ಎ ಅಧ್ಯಕ್ಷೆ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಎಣ್ಮಕಜೆ ಗ್ರಾಮಪಂಚಾಯತಿ ಮಾತಾನಾಡಿತ್ತಾ ಬೀಡಿಕಟ್ಟುವ ಮಹಿಳೆ ಅಂಗಳಕ್ಕಿಳಿದು ಗಗನಕ್ಕೆ ಹಾರಿ ಒಳ್ಳೆಯ ಕುಟುಂಬ ಕಟ್ಟುವಲ್ಲಿ ಪಾತ್ರವಹಿಸಿ ಸಮಾಜ ಸೇವಕಿಯಾಗಿ, ಪತ್ನಿಯಾಗಿ, ಸಮಾಜ ಸುಧಾರಕಿಯಾಗಿ, ಸ್ತ್ರೀ ಶೋಷಣೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. ಉಪನ್ಯಾಸಕಿ ವಿನೀಷ, ಎಳವೆಯಲ್ಲಿ ಪೊಷಕರ ಆಶ್ರಯದಲ್ಲಿ, ಯೌವ್ವನದಲ್ಲಿ ಗಂಡನ ಆಸರೆಯಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ನೆರವಿನಿಂದ ಜೀನನ ಸಾಫಲ್ಯ
ಜಲ ಸಾಕ್ಷರತಾ ಅಭಿಯಾನ
ನಾಲಂದ ಕಾಲೇಜಿನ ವಿದ್ಯಾರ್ಥಿಗಳಿಂದ ಜಲ ಸಾಕ್ಷರತಾ ಅಭಿಯಾನ ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಜಂಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಿತು.
ಏಕದಿನ ವಿಚಾರಗೋಷ್ಠಿ : ನಾಯಕತ್ವಕೌಶಲ್ಯ
ಪೆರ್ಲ: ನಾಲಂದ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕ ಮತ್ತು ಜೆ.ಸಿ.ಐ.ಯ ಸಹಯೋಗದೊಂದಿಗೆ ನಾಯಕತ್ವ ಕೌಶಲ್ಯದ ಕುರಿತು ಒಂದು ದಿನದ ವಿಚಾರಗೋಷ್ಠಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶಿವಕುಮಾರ್ ವಹಿಸಿ ನಾಯಕನಾದವ ಜವಬ್ದಾರಿಯುತವಾಗಿ ವರ್ತಿಸಿ ಗುಂಪನ್ನು ಮುನ್ನಡೆಸವ ಕೌಶಲ್ಯ ಹೊಂದಿರಬೇಕು ಮತ್ತು ಅವನು ಇತರರಿಗೆ ಮಾದರಿಯಾಗುತ್ತಾನೆ. ನಾಯಕತ್ವಕೌಶಲ್ಯ ವಿಚಾರಧಾರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಲಿದೆ ಎಂದು ಹೇಳಿದರು. ವಿದ್ವಾನ್ ಎಸ್.ಬಿ. ಖಂಡಿಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಸೇವೆಗೋಸ್ಕರ ತಮ್ಮನ್ನು ತಾವು ತೊಡಗಿಸಿಕೊಳ್ಳುವಾಗ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ
ಪ್ರಾಕೃತಿಕ ನೀರು,ಕೆರೆ ; ಜೀವನಾಡಿ-ಕಜಂಪಾಡಿ ಸುಬ್ರಹ್ಮಣ್ಯ ಭಟ್
ಜಲಸಾಕ್ಷರತಾ ಅಭಿಯಾನದ ಭಾಗವಾಗಿ ನಿರ್ಮಿಸುತ್ತಿರುವ ಜೀವಜಲ ಕಿರುಚಿತ್ರದ ಚಿತ್ರೀಕರಣ ಕಜಂಪಾಡಿ ಪ್ರದೇಶದಲ್ಲಿರುವ ಸುಬ್ರಹ್ಮಣ್ಯ ಭಟ್ಟರ ತೋಟದಲ್ಲಿರುವ ಜಲಾಶಯದ (ವಿಶಾಲವಾದಕೆರೆ ) ಪರಿಸರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಭಟ್ಟರತೋಟದಲ್ಲಿರುವ ವಿಶಾಲವಾದಕೆರೆ ಸ್ವಾತಂತ್ರ್ಯಪೂರ್ವದಲ್ಲಿ ಅವರ ಹಿರಿಯರು ನಿರ್ಮಿಸಿದ್ದು . 1958 ರ ನಂತರ ಸುಬ್ರಹ್ಮಣ್ಯ ಭಟ್ ಅವರು ವಿಶಾಲವಾದ ಕೆರೆಯಲ್ಲಿ ನೀರು ತುಂಬಿ ನಿಲ್ಲುವಂತೆ ಪ್ರತಿ ವರ್ಷವು ಕೆರೆಯ ಕೆಲಸಕಾರ್ಯಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಸುತ್ತಾ ಬಂದಿದ್ದಾರೆ. ಸುಮಾರು 15 ಅಡಿ ಆಳ 5000 ಚದರ ಅಡಿ ವಿಸ್ತೀರ್ಣದಲ್ಲಿರುವ ಕೆರೆ ನೀರಿನಿಂದ ತುಂಬಿತುಳುಕುತ್ತಿದೆ. ಪ್ರತೀ ದಿನ ಸುಮಾರು
ಡಿಜಿಟಲ್ & ಕ್ಯಾಶ್ಲೆಶ್ ಸಿಸ್ಟಮ್ : ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ
ಪೆರ್ಲ : ನಾಲಂದ ಮಹಾವಿದ್ಯಾಲಯದಲ್ಲಿ ಕಾಲೇಜಿ ಅರ್ಥಶಾಸ್ತ್ರ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿಜಿಟಲ್ ಮತ್ತು ಕ್ಯಾಶ್ಲೆಶ್ ಸಿಸ್ಟಮ್ ಎಂಬ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯನ್ನು ಸುಧೀರ್ಕುಮಾರ್ ಶೆಟ್ಟಿ ಎಣ್ಮಕಜೆ ಯು.ಎ. ಇಇದರ ನಿರ್ದೇಶಕರು ಮತ್ತು ಅಧ್ಯಕ್ಷರು ಯು.ಎ.ಇ ಎಕ್ಸೇಂಜ್ .ಯಲ್.ಯಲ್.ಸಿ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಸುಧೀರ್ಕುಮಾರ್ ಶೆಟ್ಟಿ ಎಣ್ಮಕಜೆ ಅವರು ಡಿಜಿಟಲ್& ಕ್ಯಾಶ್ಲೆಶ್ ಸಿಸ್ಟಮ್ ಎಂಬ ವಿಷಯದಲ್ಲಿ ಮಾತಾನಾಡಿದರು. ಸರಕಾರ
ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡ್
ಕಣ್ಣೂರು ವಿಶ್ವವಿದ್ಯಾನಿಲಯದ 2016-17 ನೇ ವರ್ಷದ ಕಲೋತ್ಸವವು ಇತ್ತೀಚೆಗೆ ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜು, ಪೊವ್ವಲ್ನಲ್ಲಿ ನಡೆಯಿತು. ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವಿಕಾಸ್ (ದೇವೇಂದ್ರ), ಪ್ರಜ್ಞಾ (ಅಗ್ನಿ), ಗಿರೀಶ್ (ವರುಣ), ಅರ್ಪಿತ್ (ನರಕಾಸುರ), ಅಭಿಲಾಷ್ (ಮುರಾಸುರ), ನಿರಂಜನ್ ಬಲ್ಲುಲಾಯ (ಕೃಷ್ಣ), ಸಾಗರ್ (ಸತ್ಯಭಾಮ), ಶರತ್ ಕುಮಾರ್ ಮತ್ತು ಶರ್ಮಿತಾ (ದೂತರು), ಇವರು ’ನರಕಾಸುರ ಮೋಕ್ಷ’ ಎಂಬ ಕಥಾಭಾಗವನ್ನು ಆಡಿ ತೋರಿಸಿ ಜನಮೆಚ್ಚುಗೆಗೆ ಪಾತ್ರರಾದರು.
ಜಲ ಸಾಕ್ಷರತಾ ಅಭಿಯಾನ ರ್ಯಾಲಿ
ಪೆರ್ಲ: ನಾಲಂದ ಮಹಾವಿದ್ಯಾಲಯದ ಭೂಮಿತ್ರಾ ಸೇನಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನೊಳಗೊಂಡ ಜಲ ಸಾಕ್ಷರತಾ ಅಭಿಯಾನವನ್ನು ರ್ಯಾಲಿ ನಡೆಸಿ ಜಲ ಸಂರಕ್ಷಣೆಯ ಘೋಷಣೆಗಳನ್ನು ಕರೆದು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರ್ಯಾಲಿ ಕಾಲೇಜಿನ ಪರಿಸರದಿಂದ ಆರಂಭವಾಗಿ ಪೆರ್ಲ ಪೇಟೆಯಲ್ಲಿ ಸಮಾಪಣೆಗೊಂಡಿತು. ಜಲ ಸಾಕ್ಷರತಾ ಅಭಿಯಾನವನ್ನು ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಕೆ. ಶಿವಕುಮಾರ್ ಉದ್ಘಾಟಿಸಿ, ಪಂಚಭೂತಗಳಲ್ಲಿ ನೀರು ಮತ್ತು ಗಾಳಿ ಅತೀ ಪ್ರಧಾನವಾದದ್ದು. ಇವೆರಡರ ಲಭ್ಯತೆ ಮತ್ತು ಗುಣಮಟ್ಟ ಗಣನೀಯವಾಗಿ ವೈಪರೀತ್ಯವಾಗಿರುವುದು ವಿಷಾಧನೀಯ. ಜಲ ಸಂರಕ್ಷಣೆ ಮತ್ತು ಉಸಿರಾಡಲು
ಡಾ| ಕೆ. ಕಮಲಾಕ್ಷರಿಗೆ ವಿದಾಯ ಕೂಟ
ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ| ಕೆ.ಕಮಲಾಕ್ಷರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಯ ಸಂದರ್ಭ ನೋಡಿ ನಮ್ಮ ನಿರೀಕ್ಷೆಗೂ ಮೀರಿ ತಮ್ಮದೇ ಆದ ರೀತಿಯಲ್ಲಿ ಸಂಸ್ಥೆಯ ಒಳಿತಿಗಾಗಿ ನಿರಂತರವಾಗಿ ದುಡಿದ ಡಾ| ಕಮಲಾಕ್ಷರು ಶುಕ್ಲ ಪಕ್ಷದ ಚಂದ್ರನಂತೆ ಮುಂದೆ ಬದುಕಿನಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘವು ನಾಲಂದ ಕಾಲೇಜನ್ನು ವಹಿಸಿಕೊಂಡಾಗ ಮುಂದೆ ಇದನ್ನು ನಡೆಸುವ ಸಾರಥಿ ಯಾರೆಂಬ ವಿಚಾರ ಬಂದಾಗ
ವಿಶ್ವ ಅರ್ಬುದ ದಿನ
ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ವಿಶ್ವ ಅರ್ಬುದ ದಿನವನ್ನು ಆಚರಿಸಲಾಯಿತು. ಮದ್ಯಪಾನ, ಧೂಮಪಾನ, ಹೊಗೆಸೊಪ್ಪಿನ ಸೇವನೆಗಳಿಂದ ಮತ್ತು ಎಂಡೋಸಲ್ಪಾನ್ ಮೊದಲಾದ ಮಾರಕ ವಿಷಗಳನ್ನು ಬಳಸಿ ಬೆಳೆಸಿದ ಆಹಾರಗಳನ್ನು ಸೇವಿಸುವುದರಿಂದ ಆಹಾರ ಕ್ರಮಗಳಿಂದ ಅರ್ಬುದ ರೋಗ ಬರುತ್ತದೆ. ಆದುದರಿಂದ ಕೆಟ್ಟವ್ಯಸನಗಳಿಗೆ ಬಲಿಯಾಗದೆ ಶುದ್ಧ ಆಹಾರವನ್ನು ಸೇವಿಸಿದರೆ ನಮ್ಮ ಬದುಕು ಹಸನಾಗುತ್ತದೆ. ಈ ವಿಚಾರದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ಕಾಲೇಜಿನ ಉಪನ್ಯಾಸಕ ಕಿಶನ್ ಪಳ್ಳತ್ತಡ್ಕರವರು ನುಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆಯವರು ಅರ್ಬುದ ರೋಗಗಳಲ್ಲಿ ಹಲವು