×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದದಲ್ಲಿ ರಕ್ತದಾನಿಗಳ ದಿನ

ನಾಲಂದ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬಿನ ನೇತೃತ್ವದಲ್ಲಿ ವಿಶ್ವರಕ್ತದಾನಿಗಳ ದಿನವನ್ನು ಆಚರಿಸಲಾಯಿತು. ರಕ್ತದಾನದ ಮಹತ್ವ ಹಾಗೂ ಈ ವರ್ಷದ ದ್ಯೇಯವಾಕ್ಯವಾದ “ರಕ್ತ ಕೊಡು, ಈಗ ಕೊಡು, ಆಗಾಗ ಕೊಡು” ಎಂಬುದರ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ರಕ್ತದಾನ ಮಹಾದಾನ ಮಾತ್ರವಲ್ಲ ಅನ್ನದಾನಕ್ಕಿಂತಲೂ ಶ್ರೇಷ್ಟ ಹಾಗೂ ರಕ್ತದಾನದ ಮೂಲಕ ಒಂದು ಜೀವ ಉಳಿಸುವ ಮಹತ್ಕಾರ್ಯ ಸಾಧಿಸಬಹುದು, ರಕ್ತದಾನ ಮಾಡುವುದರಲ್ಲಿ ಕೊಡುವವನಿಗೂ ಹಾಗು ಪಡೆಯುವವನಿಗೂ ಪ್ರಯೋಜನವಿದೆ ಎಂದು ಕನ್ನಡ ವಿಭಾಗದ ಉಪನ್ಯಾಸಕರಾದ ಕೇಶವ

Read More

ನಾಲಂದದಲ್ಲಿ ವಿಶ್ವ ಪರಿಸರ ದಿನ

ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕ ಮತ್ತು ಭೂಮಿತ್ರಾ ಸೇನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ | ಶಂಕರನಾರಾಯಣ ಹೊಳ್ಳ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪರಿಸರವನ್ನು ಪ್ರೀತಿಸಿ, ಪರಿಸರದ ಬಗ್ಗೆ ಸದಾ ಕಾಳಜಿವಹಿಸಬೇಕು ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕ ನಿರ್ಮಿಸಿದ ಬೇಂಗಪದವು-ದಾಸ್ರೋಕ್ ರಸ್ತೆಯ ಬದಿಗಳಲ್ಲಿ ಹೆಚ್ಚಿನ ಸಂಖೆಯಲ್ಲಿ ಸಸಿಗಳನ್ನು

Read More

ಯಕ್ಷಗಾನದಲ್ಲಿ ನಾಲಂದಕ್ಕೆ ’ಎ’ ಗ್ರೇಡ್

ಕಣ್ಣೂರು ವಿಶ್ವವಿದ್ಯಾನಿಲಯದ 2016-17 ೭ನೇ ವರ್ಷದ ಕಲೋತ್ಸವವು ಇತ್ತೀಚೆಗೆ ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜು, ಪೊವ್ವಲ್‌ನಲ್ಲಿ ನಡೆಯಿತು. ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವಿಕಾಸ್ (ದೇವೇಂದ್ರ), ಪ್ರಜ್ಞಾ(ಅಗ್ನಿ), ಗಿರೀಶ್ (ವರುಣ), ಅರ್ಪಿತ್(ನರಕಾಸುರ), ಅಭಿಲಾಷ್(ಮುರಾಸುರ), ನಿರಂಜನ್ ಬಲ್ಲುಲಾಯ(ಕೃಷ್ಣ), ಸಾಗರ್(ಸತ್ಯಭಾಮ), ಶರತ್ ಕುಮಾರ್ ಮತ್ತು ಶರ್ಮಿತಾ (ದೂತರು), ಇವರು ’ನರಕಾಸುರ ಮೋಕ್ಷ’ ಎಂಬ ಕಥಾಭಾಗವನ್ನು ಆಡಿ ತೋರಿಸಿ ಜನಮೆಚ್ಚುಗೆಗೆ ಪಾತ್ರರಾದರು. ಇವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.

Read More

ಸಸ್ಯ ಸಂಪತ್ತನ್ನು ವೃದ್ಧಿಸಿ, ಜಲಸಂರಕ್ಷಣೆಯತ್ತ ಮುನ್ನಡೆಯಬೇಕು : ಶ್ರೀ ಪಡ್ರೆ

ಜೀವಜಲ ಕಿರುಚಿತ್ರ ಬಿಡುಗಡೆ ಪೆರ್ಲ: ನಾಲಂದ ಮಹಾವಿದ್ಯಾಲಯದ ಪರಿಸರ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವ ಕಿರುಚಿತ್ರ ಜೀವಜಲವನ್ನು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದ ಪತ್ರಕರ್ತ, ಶ್ರೀಪಡ್ರೆ ಬಿಡುಗಡೆಗೊಳಿಸಿದರು. ಜೀವಜಲ ಕಿರುಚಿತ್ರದ ತಂಡವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಸ್ಯ ಸಂಪತ್ತನ್ನು ವೃದ್ಧಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯಾರ್ಥೀಗಳಿಗೆ ಕರೆ ನೀಡಿದರು. ಅತ್ಯಂತ ಹೆಚ್ಚು ಮಳೆ ಲಭಿಸುವ ನಮ್ಮ ಕರಾವಳಿ ಪ್ರದೇಶವನ್ನೇ ಬರಪೀಡಿತ ಪ್ರದೇಶವಾಗಿ ಗುರುತಿಸಲಾಗಿದೆ ಎಂದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯ ತೀವ್ರತೆ ಎಷ್ಟರಮಟ್ಟಿಗಿರಬಹುದು ಎಂದು ಗಂಭಿರವಾಗಿ ಆಲೋಚಿಸಬೇಕಾಗಿದೆ

Read More

ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ

ಮಾದಕ ವಸ್ತುಗಳ ಸೇವನೆಯ ವಿರುದ್ಧ ಜನಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಮತ್ತು ಅಬಕಾರಿ ಇಲಾಖೆಯ ಸಹಯೋಗದಲ್ಲಿ ಮಾರ್ಚ್ 28 ರಂದು ಯುವ ಜನಾಂಗ ಮತ್ತು ಮಾದಕ ವಸ್ತುಗಳು ಎಂಬ ವಿಷಯದ ಮೇಲೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ನಾರಾಯಣ ಪ್ರದೀಪ್‌ರವರು ಕ್ಲಾಸು ನಡೆಸಿಕೊಟ್ಟರು. ಶ್ರಮ ಜೀವಿಗಳು ದೈಹಿಕ ಶ್ರಮವನ್ನು ಮರೆಯುವುದಕ್ಕಾಗಿ ಗಂಡು ಹೆಣ್ಣು ಭೇದವಿಲ್ಲದೆ ಕ್ಷಣಿಕ ಸುಖಕ್ಕೆ ಬಲಿಯಾಗಿ ಕೊನೆಗೆ ಮಾದಕ ವಸ್ತುಗಳ ದಾಸರಾಗುತ್ತಾರೆ. ಯುವಜನಾಂಗ ಶೋಕಿಜೀವನಕ್ಕೆ ತೊಡಗಿ ಅನಂತರ ಅದುವೇ

Read More

ಅಂತರಾಷ್ಟ್ರೀಯ ಕಿಡ್ನಿ ದಿನಾಚರಣೆ

ನಾಲಂದ ಮಹಾವಿದ್ಯಾಲಯದ ಎನ್.ಯಸ್.ಯಸ್ ವತಿಯಿಂದ ಅಂತರಾಷ್ಟ್ರೀಯ ಕಿಡ್ನಿ ದಿನಾಚರಣೆಯನ್ನು ಆಚರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾದ ಮಾಲಿನಿಯವರು ಮಾನವನ ಅಂಗಾಗಳಲ್ಲಿ ಕಿಡ್ನಿಯು ಬಹಳ ಪ್ರಧಾನವಾದದ್ದು . ಕಿಡ್ನಿಯ ಬಗ್ಗೆ ಜಾಗತಿಕಮಟ್ಟದಲ್ಲಿ ತಿಳುವಳಿಕೆ ಮೂಡಿಸಬೇಕು ಮತ್ತು ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಬಾರದಂತೆ ಎಚ್ಚರವಹಿಸಬೇಕು. ರಕ್ತದ ಒತ್ತಡ ತಡೆಯಬೇಕು, ಧೂಮಪಾನ ಮಾಡಬಾರದು, ಅತಿಯಾಗಿ ಸಿಹಿಸೇವನೆ ಮಾಡಬಾರದು. ಶರೀರದ ತೂಕವನ್ನು ಸಮತೋಲನದಲ್ಲಡಬೇಕು ವೈದ್ಯರ ತಪಾಸಣೆ ಮೂಲಕವೇ ಔಷಧಿ ಪಡೆಯಬೇಕು. ಎಂದು ಹೇಳಿದರು. ಎನ್.ಎಸ್. ಎಸ್. ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆ ಅವರು ತಮ್ಮ ಅಧ್ಯಕ್ಷೀಯ

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ನಾಲಂದ ಕಾಲೇಜಿನ ಎನ್.ಎಸ್.ಎಸ್‌ನ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಆಯಿಷಾ ಎ.ಎ ಅಧ್ಯಕ್ಷೆ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಎಣ್ಮಕಜೆ ಗ್ರಾಮಪಂಚಾಯತಿ ಮಾತಾನಾಡಿತ್ತಾ ಬೀಡಿಕಟ್ಟುವ ಮಹಿಳೆ ಅಂಗಳಕ್ಕಿಳಿದು ಗಗನಕ್ಕೆ ಹಾರಿ ಒಳ್ಳೆಯ ಕುಟುಂಬ ಕಟ್ಟುವಲ್ಲಿ ಪಾತ್ರವಹಿಸಿ ಸಮಾಜ ಸೇವಕಿಯಾಗಿ, ಪತ್ನಿಯಾಗಿ, ಸಮಾಜ ಸುಧಾರಕಿಯಾಗಿ, ಸ್ತ್ರೀ ಶೋಷಣೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. ಉಪನ್ಯಾಸಕಿ ವಿನೀಷ, ಎಳವೆಯಲ್ಲಿ ಪೊಷಕರ ಆಶ್ರಯದಲ್ಲಿ, ಯೌವ್ವನದಲ್ಲಿ ಗಂಡನ ಆಸರೆಯಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ನೆರವಿನಿಂದ ಜೀನನ ಸಾಫಲ್ಯ

Read More

ಜಲ ಸಾಕ್ಷರತಾ ಅಭಿಯಾನ

ನಾಲಂದ ಕಾಲೇಜಿನ ವಿದ್ಯಾರ್ಥಿಗಳಿಂದ ಜಲ ಸಾಕ್ಷರತಾ ಅಭಿಯಾನ ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಜಂಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಿತು.

Read More

ಏಕದಿನ ವಿಚಾರಗೋಷ್ಠಿ : ನಾಯಕತ್ವಕೌಶಲ್ಯ

ಪೆರ್ಲ: ನಾಲಂದ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕ ಮತ್ತು ಜೆ.ಸಿ.ಐ.ಯ ಸಹಯೋಗದೊಂದಿಗೆ ನಾಯಕತ್ವ ಕೌಶಲ್ಯದ ಕುರಿತು ಒಂದು ದಿನದ ವಿಚಾರಗೋಷ್ಠಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶಿವಕುಮಾರ್ ವಹಿಸಿ ನಾಯಕನಾದವ ಜವಬ್ದಾರಿಯುತವಾಗಿ ವರ್ತಿಸಿ ಗುಂಪನ್ನು ಮುನ್ನಡೆಸವ ಕೌಶಲ್ಯ ಹೊಂದಿರಬೇಕು ಮತ್ತು ಅವನು ಇತರರಿಗೆ ಮಾದರಿಯಾಗುತ್ತಾನೆ. ನಾಯಕತ್ವಕೌಶಲ್ಯ ವಿಚಾರಧಾರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಲಿದೆ ಎಂದು ಹೇಳಿದರು. ವಿದ್ವಾನ್ ಎಸ್.ಬಿ. ಖಂಡಿಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಸೇವೆಗೋಸ್ಕರ ತಮ್ಮನ್ನು ತಾವು ತೊಡಗಿಸಿಕೊಳ್ಳುವಾಗ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ

Read More

ಪ್ರಾಕೃತಿಕ ನೀರು,ಕೆರೆ ; ಜೀವನಾಡಿ-ಕಜಂಪಾಡಿ ಸುಬ್ರಹ್ಮಣ್ಯ ಭಟ್

ಜಲಸಾಕ್ಷರತಾ ಅಭಿಯಾನದ ಭಾಗವಾಗಿ ನಿರ್ಮಿಸುತ್ತಿರುವ ಜೀವಜಲ ಕಿರುಚಿತ್ರದ ಚಿತ್ರೀಕರಣ ಕಜಂಪಾಡಿ ಪ್ರದೇಶದಲ್ಲಿರುವ ಸುಬ್ರಹ್ಮಣ್ಯ ಭಟ್ಟರ ತೋಟದಲ್ಲಿರುವ ಜಲಾಶಯದ (ವಿಶಾಲವಾದಕೆರೆ ) ಪರಿಸರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಭಟ್ಟರತೋಟದಲ್ಲಿರುವ ವಿಶಾಲವಾದಕೆರೆ ಸ್ವಾತಂತ್ರ್ಯಪೂರ್ವದಲ್ಲಿ ಅವರ ಹಿರಿಯರು ನಿರ್ಮಿಸಿದ್ದು . 1958 ರ ನಂತರ ಸುಬ್ರಹ್ಮಣ್ಯ ಭಟ್ ಅವರು ವಿಶಾಲವಾದ ಕೆರೆಯಲ್ಲಿ ನೀರು ತುಂಬಿ ನಿಲ್ಲುವಂತೆ ಪ್ರತಿ ವರ್ಷವು ಕೆರೆಯ ಕೆಲಸಕಾರ್ಯಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಸುತ್ತಾ ಬಂದಿದ್ದಾರೆ. ಸುಮಾರು 15 ಅಡಿ ಆಳ 5000 ಚದರ ಅಡಿ ವಿಸ್ತೀರ್ಣದಲ್ಲಿರುವ ಕೆರೆ ನೀರಿನಿಂದ ತುಂಬಿತುಳುಕುತ್ತಿದೆ. ಪ್ರತೀ ದಿನ ಸುಮಾರು

Read More