×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಜನಸಂಖ್ಯೆ ದೇಶದ ಸಂಪತ್ತಾಗಿ ಬದಲಾದಲ್ಲಿ ರಾಷ್ಟ್ರದ ಅಭಿವೃದ್ಧಿ

ಜನಸಂಖ್ಯಾ ಹೆಚ್ಚಳ ಶಾಪವಲ್ಲ. ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ದೇಶದ ಸಂಪತ್ತಾಗಿ ಮಾರ್ಪಡುತ್ತದೆ ಎಂದು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಜನಸಂಖ್ಯಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭಾರತದ ಒಟ್ಟು ಜನಸಂಖ್ಯೆ 130 ಕೋಟಿ ಮೀರಿದ್ದು, ಚೈನಾವನ್ನು ಮೀರಿಸಿ ಮೊದಲನೇ ಸ್ಥಾನಕ್ಕೆ ಬರಲು ಸಣ್ಣ ಅಂತರವೇ ಬಾಕಿಯಿದೆಯಷ್ಟೇ. ನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬರುವುದು ಮುಖ್ಯವಲ್ಲ. ಆ ಜನಸಂಖ್ಯೆಯನ್ನು ಸಂಪತ್ತಾಗಿ

Read More

ವೈದ್ಯ ಹಾಗೂ ರೋಗಿಗಳ ಸಂಬಂಧ ಗಟ್ಟಿಗೊಳ್ಳಲಿ

ಮಾನವೀಯ ಸಂಬಂಧಗಳು ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಹಾಗೂ ರೋಗಿಗಳ ನಡುವಿನ ಸಂಬಂಧವೂ ಶಿಥಿಲಗೊಳ್ಳುತ್ತಿದ್ದು, ವೈದ್ಯ ಹಾಗೂ ರೋಗಿಯ ಸಂಬಂಧ ಗಟ್ಟಿಗೊಳ್ಳಬೇಕಿದೆ ಎಂದು ಉಕ್ಕಿನಡ್ಕಸ್ ಆಯುರ್ವೇದಿಕ್ಸ್ ನ ಮಾಲಕ ಹಗು ನಾಲಂದ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಸಮಸ್ಯೆಗಳೊಂದಿಗೆ, ಹಲವು ರಾತ್ರಿ ಕೆಲಸ ಮಾಡುವ ವೈದ್ಯರ ಕುರಿತು ಸಂಶಯ ಪಡುವುದು ಸರಿಯಲ್ಲ.

Read More

ವ್ಯಾಸನಗಳಿಗೆ ಬಲಿಯಾಗುವ ಮುನ್ನ ಹೆತ್ತವರನ್ನು ನೆನಪಿಸಿ’

ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಕಾಸರಗೋಡು ಬಿ.ಸಿ.ಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲೆ ಮತ್ತು ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಹಾಗೂ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಸನಗಳಿಗೆ

Read More

ನಾಲಂದ ಕಾಲೇಜಿನಲ್ಲಿ ಯೋಗ ದಿನ 2019 : ವಿದ್ಯಾರ್ಥಿಗಳಿಗೆ ಯೋಗ ತರಬೇತಿ

ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ನೇತೃತ್ವದಲ್ಲಿ ಜರಗಿದ ಯೋಗದಿನ -2019 ವಿಶೇಷ ಕಾರ್ಯಕ್ರಮದಲ್ಲಿ ಪುತ್ತೂರು, ಮಂಗಳೂರು ಯೋಗಾರೋಗ್ಯ ಮತ್ತು ಯೋಗವಸಿಷ್ಟ ಯೋಗ ತೆರಪಿ ನಿರ್ದೇಶಕ ಡಾ. ಮಹಾಬಲ ಭಟ್ ನಾಲಂದ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.

Read More

ಯೋಗದಿಂದ ಅಂತರಂಗ – ಬಹಿರಂಗ ಶುದ್ಧಿ

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ’ಯೋಗ ದಿನ – 2019’ ವಿಶೇಷ ಕಾರ್ಯಕ್ರಮದಲ್ಲಿ ಡಾ.ಮಹಾಬಲ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಂಚೇಂದ್ರಿಯಗಳ ನಿಗ್ರಹ, ಅಂತರಂಗ- ಬಹಿರಂಗ ಶುದ್ಧಿಗೊಳಿಸುವ, ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುವ ಯೋಗವನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ಪುತ್ತೂರು, ಮಂಗಳೂರು ಯೋಗಾರೋಗ್ಯ ಮತ್ತು ಯೋಗವಸಿಷ್ಟ ಯೋಗ ತೆರಪಿ ನಿರ್ದೇಶಕ ಡಾ.ಮಹಾಬಲ ಭಟ್ ಹೇಳಿದರು. ಯೋಗ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ

Read More

ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನ

ದಿ.ಗೌರು ಮಾಧವ ಭಟ್ ಸ್ಮಾರಕ‍ ವಿವೇಕಾನಂದ ಶಿಶುಮಂದಿರ ಪೆರ್ಲ ಇದರ ಲೋಕಾರ್ಪಣೆ ನೆರವೇರಿಸಿ ವಿವಿಕ್ತಾನಂದ ಸ್ವಾಮೀಜಿ ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜತೆಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುವುದು ಎಂದು ಕೇರಳ ರಾಜ್ಯ ಚಿನ್ಮಯ ಮಿಷನ್ ಕ್ಷೇತ್ರೀಯ ಮಖ್ಯಸ್ಥ ಶ್ರೀ ವಿವಿಕ್ತಾನಂದ ಸ್ವಾಮೀಜಿ ಹೇಳಿದರು. ದಿ.ಗೌರು ಮಾಧವ ಭಟ್ ಸ್ಮಾರಕ‍ ವಿವೇಕಾನಂದ ಶಿಶುಮಂದಿರ ಪೆರ್ಲ ಇದರ ಲೋಕಾರ್ಪಣೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಪೋಷಕರು ತಮ್ಮ

Read More

’ಬಲಿಷ್ಠ ಹಾಗೂ ಸುಂದರ ಹಲ್ಲುಗಳಿಂದ ಆತ್ಮವಿಶ್ವಾಸ ವೃದ್ಧಿ’

ಸ್ವರ್ಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಶ್ರೀಕೃಷ್ಣ ಭಟ್ ಅಂದವಾದ ವದನಕ್ಕೆ ಸುಂದರ ನಗು ಮೌಲ್ಯ ಹಾಗೂ ಮೆರುಗು ನೀಡುವುದು.ಬಲಿಷ್ಟ ಹಾಗೂ ಸುಂದರ ಹಲ್ಲುಗಳಿಂದ ಮಾನವನ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸ ವೃದ್ಧಿಸಿ ಸರ್ವತೋಮುಖ ಯಶಸ್ಸಿಗೆ ಕಾರಣವಾಗುವುದು ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖಾಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಹೇಳಿದರು. ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿ ವಾಣೀನಗರ-ಪಡ್ರೆ, ನಬಾರ್ಡ್ ಎಸ್ ಡಿಪಿ-ಸಿಆರ್ ಡಿ ನೀಲೇಶ್ವರ, ಪೆರ್ಲ ನಾಲಂದ ಕಾಲೇಜು ಗ್ರಾಮ ವಿಕಾಸ

Read More

ಪ್ರಾಕೃತಿಕ ಸಂಪನ್ಮೂಲಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಪ್ರತಿಯೊಬ್ಬನ ಕರ್ತವ್ಯ

ನಾಲಂದ ಕಾಲೇಜಿನಲ್ಲಿ ನಡೆದ ವಿಶ್ವ ಜಲ ದಿನಾಚರಣೆಯಲ್ಲಿ ಉಪನ್ಯಾಸಕಿ ಶಿಲ್ಪಾ ಎಸ್ ಹೆಗ್ಡೆ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಸಂಪನ್ಮೂಲಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಲಂದ ಕಾಲೇಜು ಸ್ಟೇಟಿಸ್ಟಿಕ್ಸ್ ವಿಭಾಗ ಉಪನ್ಯಾಸಕಿ ಶಿಲ್ಪಾ ಎಸ್.ಹೆಗ್ಡೆ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಜರಗಿದ ವಿಶ್ವ ಜಲ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಂಖ್ಯಾ ಹೆಚ್ಚಳ, ನೀರಿನ ದುರ್ಬಳಕೆ, ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ

Read More

ಪರಿಸರ ಸಂರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ

ನಾಲಂದ ಕಾಲೇಜಿನಲ್ಲಿ ನಡೆದ ವಿಶ್ವ ಅರಣ್ಯ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕ ಕೇಶವ ಶರ್ಮ ಸುಡು ಬಿಸಿಲಿನಲ್ಲಿ ನೆರಳಾಗಿ ತಂಪನ್ನೀಯುವ ಮರಗಳು ಉದುರುವ ಎಲೆ, ಬೇರುಗಳಿಂದ ನೀರಿನ ಹರಿವನ್ನು ತಡೆಗಟ್ಟಿ ಇಳೆಗೆ ನೀರುಣಿಸುವುದಲ್ಲದೆ ಜೀವ ಸಂಕುಲಕ್ಕೆ ಬೇಡವಾದ ಅಂಗಾರಾಮ್ಲ ಸ್ವೀಕರಿಸಿ, ಜೀವಿಗಳ ಉಳಿವಿಗೆ ಬೇಕಾದ ಶುದ್ಧ ಆಮ್ಲಜನಕ ಒದಗಿಸಿ ಪ್ರಕೃತಿ ಸಮತೋಲನಕ್ಕೆ ಕಾರಣವಾಗಿದೆ.ಇಂತಹ ನಿಸ್ವಾರ್ಥಿ ಮರಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ ಎಂದು ನಾಲಂದ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ, ಸ್ಟಾಫ್ ಸೆಕ್ರೆಟರಿ ಕೇಶವ ಶರ್ಮ ಹೇಳಿದರು. ಕಾಲೇಜು

Read More

ಪೆರ್ಲ ’ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರ – ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಕೊನೆಯ ದಿನ

ಪೆರ್ಲ: ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್, ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ-ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ-ನೀರ್ಚಾಲು, ಪೆರ್ಲ ಶ್ರೀ ಶಂಕರ ಸೇವಾ ಸಮಿತಿ, ಕ್ಯಾಂಪ್ಕೊ ಇನ್ ಸೇವಾ, ನಾಲಂದ ಮಹಾವಿದ್ಯಾಲಯ, ನಾಲಂದ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಎ.8 ರಿಂದ 12 ರ ತನಕ ಬೆಳಗ್ಗೆ 8.30 ರಿಂದ ಸಂಜೆ 5 ರ ತನಕ ಪೆರ್ಲ ಶಂಕರಸದನ ಪರಿಸರದಲ್ಲಿ ಒಟ್ಟು 5 ದಿನಗಳ ’ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರ ನಡೆಯಲಿದ್ದು ಮಾರ್ಚ್ 30

Read More