News & Events
ನಾಲಂದ ಕಾಲೇಜಿನಲ್ಲಿ ಎ. 1 ರಿಂದ ಉಚಿತ ಬಿಡ್ಜ್ ಕೋರ್ಸ್
ಪೆರ್ಲ: ಕಣ್ಣೂರು ವಿಶ್ವ ವಿದ್ಯಾಲಯ ಅಂಗೀಕೃತ ಪೆರ್ಲ ನಾಲಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಬ್ರಿಡ್ಜ್ ಕೋರ್ಸ್ ನಡೆಯಲಿದೆ. ಏಪ್ರಿಲ್ 1 ರಿಂದ ತರಬೇತಿ ಆರಂಭವಾಗಲಿದ್ದು, ಮಾರ್ಚ್ 2019 ರಲ್ಲಿ ಪ್ಲಸ್ ಟು ಪರೀಕ್ಷೆ ಬರೆದ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟೇಟಿಸ್ಟಿಕ್ಸ್, ಮಾರ್ಕೆಟಿಂಗ್ ವಿತ್ ಸೋಫ್ಟ್ ಸ್ಕಿಲ್ ಡೆವೆಲಪ್ಮೆಂಟ್, ಸ್ಪೋಕನ್ ಇಂಗ್ಲೀಷ್ ವಿಷಯಗಳಲ್ಲಿ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು
ತುರ್ತಿ ದ್ವೀಪದಲ್ಲಿ ಸ್ವಚ್ಛತಾ ಕಾರ್ಯಕ್ರಮ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಶನಿವಾರ ಎಸ್. ಜೆ. ಪ್ರಸಾದ್ ರವರ ಮಾಲಕತ್ವದ ಕಾಸರಗೋಡಿನ ತುರ್ತಿ ದ್ವೀಪವನ್ನು ಸಂದರ್ಶಿಸಲಾಯಿತು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶಂಕರ ನಾರಾಯಣ ಭಟ್, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ., ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ ಹಾಗೂ ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಉಪಸ್ಥಿತರಿದ್ದರು.
’ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ’
ನಾಲಂದ ಕಾಲೇಜಿನಲ್ಲಿ ಮಾದಕವಸ್ತು ಉಪಯೋಗ ವಿರುದ್ಧ ತರಗತಿ ನೀಡಿ ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಯಾತ್ರೆ ಸಂಚಾಲಕ ಮೋಹನನ್ ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ.ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಸಂದೇಶ ಯಾತ್ರೆಯ ಸಂಚಾಲಕ ಮೋಹನನ್ ಹೇಳಿದರು. ರಾಜ್ಯ ಜನಮೈತ್ರಿ ಪೊಲೀಸ್ ಮತ್ತು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ನೇತೃತ್ವ, ಪೆರ್ಲ ನಾಲಂದ ಕಾಲೇಜು
’ಮಹಿಳೆಯರು ಧೈರ್ಯದಿಂದ ಸವಾಲು ಎದುರಿಸಿ’
ಭಾರತೀಯ ಸ್ತ್ರೀಯರು ಔದ್ಯೋಗಿಕ, ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಾಧನೆ ಮಾಡಿದ್ದಾರೆ ಎಂದು ನಾಲಂದ ಕಾಲೇಜು ಜಿಯೋಗ್ರಾಫಿ ವಿಭಾಗ ಉಪನ್ಯಾಸಕಿ ವಿದ್ಯಾ. ಕೆ.ಎಂ. ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ಧರ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನವಿದ್ದು ಸ್ತ್ರೀಯರನ್ನು ಎಲ್ಲಿ ಗೌರವ ಭಾವದಿಂದ ಕಾಣಲಾಗುವುದೋ ಅಲ್ಲಿ ದೇವರಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ತಾಯಿ, ಸಹೋದರಿ, ಮಡದಿ
ಯಕ್ಷಗಾನ ಸ್ಪರ್ಧೆಯಲ್ಲಿ ನಾಲಂದ ಕಾಲೇಜು ತಂಡ ಪ್ರಥಮ
ಕಾಸರಗೋಡು : ಕಾಞಂಗಾಡು ನೆಹರು ಕಾಲೇಜಿನಲ್ಲಿ ನಡೆದ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜು ತಂಡ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. ಕಾಲೇಜು ವಿದ್ಯಾರ್ಥಿಗಳಾದ ನಿರಂಜನ್ ಬಲ್ಲುಳ್ಳಾಯ, ನಿತಿನ್ ಕುಮಾರ್, ಅಶ್ವಿನಿ, ದೀಕ್ಷಿತ್, ಅಕ್ಷಯ್, ರೂಪ, ನಿಶ, ಅಕ್ಷತ ಹಾಗೂ ಭವ್ಯಶ್ರೀ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಟ್ಯ ಗುರು ಬಾಲಕೃಷ್ಣ ಉಡ್ಡಂಗಳ ನಿರ್ದೇಶನ ಹಾಗೂ ದಾಮೋದರ ಬೆಟ್ಟಂಪಾಡಿ ಭಾಗವತಿಕೆ, ರಾಜೇಂದ್ರ ಪುಂಡಿಕೈ ಚೆಂಡೆ, ವರ್ಷಿತ್ ಕೆಜೆಕ್ಕಾರ್ ಮದ್ದಳೆಯಲ್ಲಿ ಸಹಕರಿಸಿದ್ದರು. ಉಪನ್ಯಾಸಕರುಗಳಾದ ಶಂಕರ
ಪ್ರಬಂಧ ರಚನೆ ಸ್ಪರ್ಧೆ : ತೃತೀಯ ಸ್ಥಾನ
ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಅಂಗವಾಗಿ ನೆಹರು ಕಾಲೇಜಿನಲ್ಲಿ ನಡೆದ ಕನ್ನಡ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ನಾಲಂದ ಕಾಲೇಜಿನ ತೃತೀಯ ವರ್ಷ ಬಿಕಾಂ ವಿದ್ಯಾರ್ಥಿನಿ ವಿನ್ಯಶ್ರೀ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಗಳಿಸಿದರು.
ಹೈಡ್ರೋಫೋಲಿಕ್ ತಂತ್ರಜ್ಞಾನ : ನೀರ್ಚಾಲು ಫಾರ್ಮ್ ಹೌಸ್ ಭೇಟಿ
ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ನೇತೃತ್ವದಲ್ಲಿ ಶನಿವಾರ ಹೈಡ್ರೋಫೋಲಿಕ್ ತಂತ್ರಜ್ಞಾನ ಬಳಸಿ ಕಾರ್ಯಚರಿಸುತ್ತಿರುವ ನೀರ್ಚಾಲು ಫಾರ್ಮ್ ಹೌಸ್ ಅನ್ನು ಸಂದರ್ಶಿಸಲಾಯಿತು. ಘಟಕದ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಹಾಗೂ ಸದಸ್ಯರು ಜೊತೆಗಿದ್ದರು. ಫಾರ್ಮ್ ಹೌಸ್ ನ ಜಯದೇವ ಖಂಡಿಗೆ, ಕಿರಣ ನೀರ್ಚಾಲು ತರಕಾರಿ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಉಗ್ರರ ಅಟ್ಟಹಾಸ ಭಯೋತ್ಪಾದನೆಯ ಕರಾಳ ಮುಖದ ಅನಾವರಣ : ಕೇಶವ ಶರ್ಮ
ಪೆರ್ಲ: ಕಾಶ್ಮೀರ ಕಣಿವೆಯಲ್ಲಿ ಜೆಇಎಂ ಉಗ್ರರು ಅಟ್ಟಹಾಸ ಮೆರೆದಿರುವುದು ಅತ್ಯಂತ ಹೇಯ ಕೃತ್ಯವಾಗಿದು ಭಯೋತ್ಪಾದನೆಯ ಕರಾಳ ಮುಖವನ್ನು ಭಯೋತ್ಪಾದಕ ಸಂಘಟನೆಗಳು ಮತ್ತೊಮ್ಮೆ ಜಗಜ್ಜಾಹೀರು ಗೊಳಿಸಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಎಚ್ಚೆತ್ತು ಜಾತಿ ಮತ, ಪಕ್ಷ ಬೇಧ ಮರೆತು ದೇಶದ ರಕ್ಷಣೆಗೆ ಒಗ್ಗೂಡಲೇ ಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಾಲಂದ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕ, ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ ಹೇಳಿದರು. ಪೆರ್ಲ ನಾಲಂದ ಕಾಲೇಜು ಯೂನಿಯನ್ ನೇತೃತ್ವದಲ್ಲಿ ಶುಕ್ರವಾರ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ವೀರ ಯೋಧರಿಗೆ
ಫೈನ್ ಆರ್ಟ್ಸ್ ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ
ಪೆರ್ಲ ನಾಲಂದ ಮಹಾವಿದ್ಯಾಲಯ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಾಲಂದ ನಾಲಂದ ಕಾಲೇಜು ಯೂನಿಯನ್ ನೇತೃತ್ವದಲ್ಲಿ ನಡೆದ ಫೈನ್ ಆರ್ಟ್ಸ್ ಫೆಸ್ಟ್, ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ನಾಲಂದ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿ, ಉಕ್ಕಿನಡ್ಕಾಸ್ ಆಯುರ್ವೇದ ಸಂಸ್ಥೆ ನಿರ್ದೇಶಕ ಡಾ. ಜಯಗೋವಿಂದ ಉಕ್ಕಿನಡ್ಕ ಬಹುಮಾನ ವಿತರಿಸಿದರು.
ಸಮಾಜಮುಖಿ ಚಿಂತನೆಯಿಂದ ಪರಮಾನಂದ; ಸ್ವರ್ಗ ಸುಖಾನುಭವ
ಪೆರ್ಲ ನಾಲಂದ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಗೋಪಾಲ ಚೆಟ್ಟಿಯಾರ್ ಪೆರ್ಲ: ಆತ್ಮ ಸಂತೃಪ್ತಿಗಿಂದ ಮಿಗಿಲಾದ ಸುಖ ಬೇರೊಂದಿಲ್ಲ. ಕಷ್ಟ ಕಾರ್ಪಣ್ಯದಿಂದ ಬಳಲುತ್ತಿರುವ ಜನರ ಸಂಕಷ್ಟ ಬಗೆ ಹರಿಸಿದಾಗ ಸಿಗುವ ಪರಮಾನಂದ ಹಾಗೂ ಆತ್ಮ ಸಂತೃಪ್ತಿ ಸ್ವರ್ಗ ಸುಖಕ್ಕೆ ಸಮನಾದುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು. ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತೀಯ