News & Events
International Yoga Day
NSS Unit No:49, College noticed International Yoga Day on 21/06/2022 in college seminar hall at 3.00PM.The president of the programme was college principal In charge Suresh K M.The chief guest of the programme was Dr. Swapna ukkinaduka.She trained yoga to NSS volunteers, her yoga student Smt. Gayathri shown demo to NSS volunteers. Suresh K M
ವಿಶ್ವ ಪರಿಸರ ದಿನ
ವಿವೇಕಾನಂದ ಶಿಶುಮಂದಿರದಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವು ನಡೆಯಿತು.ನಾಲಂದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀಯುತ ಕೇಶವ ಶರ್ಮ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಉಂಟುಮಾಡಿದರು. ವಿವೇಕಾನಂದ ಶಿಶುಮಂದಿರದ ಅಧ್ಯಕ್ಷೆ ಶ್ರೀಮತಿ ನಳಿನಿ ಸೈಪಂಗಲ್ಲು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಿಶು ಮಂದಿರದಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ; ಮಾತೃ ಪೂಜನ, ಸಹ ಭೋಜನ
ವಿವೇಕಾನಂದ ಶಿಶು ಮಂದಿರದಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ, ಮಾತೃ ಪೂಜನ ಹಾಗೂ ಸಹ ಭೋಜನ ಕಾರ್ರ್ಯಕ್ರಮ ಆಯೋಜಿಸಲಾಯಿತು. ಕಜಂಪಾಡಿ ಸುಬ್ರಮಣ್ಯ ಭಟ್ ಮಾತನಾಡಿ, ಭಾರತೀಯ ಸಂಸ್ಕೃತಿ ಸಂಸ್ಕಾರಗಳು ಶಿಶುಮಂದಿರಗಳಲ್ಲಿ ಮಾತ್ರ ಕಾಣಲು ಸಾಧ್ಯ.ಮಾತೃ ಭಾಷೆಯ ಶಿಕ್ಷಣ ಶ್ರೇಷ್ಠವಾಗಿದ್ದು ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಿಸುವುದು ಎಂದರು. ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ. ಕಿಶೋರ್ ಕುಮಾರ್ ರೈ ಶೇಣಿ ಶುಭ ಹಾರೈಸಿದರು.ನಾಲಂದ ಕಾಲೇಜು ಆಡಳಿತ ಮಂಡಳಿ ಸದಸ್ಯೆ ಪ್ರಭಾವತಿ, ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪoಗಲ್ಲು, ಶಿಶುಮಂದಿರದ ಮಾತೆಯರು, ಪುಟಾಣಿಗಳು ಉಪಸ್ಥಿತರಿದ್ದರು.ಶಿಶು
ಹಕ್ಕಿಗಳ ದಾಹ ತಣಿಸಲು ನೀರಿನ ಪಾತ್ರೆ; ಎನ್ನೆಸ್ಸೆಸ್ ವಿದ್ಯಾರ್ಥಿಗಳ ವಿನೂತನ ಕಾರ್ಯಕ್ರಮ
ಪ್ರಕೃತಿಯ ಅಮೂಲ್ಯ ಜೀವ ಸಂಪತ್ತಾದ ಹಕ್ಕಿಗಳ ದಾಹ ತಣಿಸಲು ನೀರಿನ ಪಾತ್ರೆ ಇರಿಸುವ ಮೂಲಕ ಎನ್ನೆಸ್ಸೆಸ್ ವಿದ್ಯಾರ್ಥಿಗಳು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಕಾಲೇಜು ಪರಿಸರದ ಮರದಲ್ಲಿ ಮಣ್ಣಿನ ಪಾತ್ರೆ ಹಾಗೂ ಗೆರಟೆಗಳಲ್ಲಿ ನೀರು ತುಂಬಿಸಿ ಮರಗಳಲ್ಲಿ ಕಟ್ಟಿ ವಿದ್ಯಾರ್ಥಿಗಳು ಹಕ್ಕಿಗಳ ಬಾಯಾರಿಕೆ ತಣಿಸುವ ವ್ಯವಸ್ಥೆ ಮಾಡಿದ್ದಾರೆ. ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಶೇಣಿ, ಉದ್ಘಾಟಿಸಿ ಮಾತನಾಡಿ ಮಾನವನ ಸ್ವಾರ್ಥ ಹಾಗೂ ಅನಿಯಂತ್ರಿತ ಉಪಯೋಗದಿಂದ ಜೀವಾ ಮೃತ ಬರಿದಾಗುತ್ತಿದೆ.ಭೂಮಿಯ ನೀರು ಸಕಲ ಜೀವಜಾಲಕ್ಕೂ ಸಲ್ಲಬೇಕು ಜಲ ಸಂರಕ್ಷಣೆಯಿಂದ ಮಾತ್ರ
ಪೆರ್ಲದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ: ಜನ ಜಾಗೃತಿ ಕಾರ್ರ್ಯಕ್ರಮ
ಎಣ್ಮಕಜೆ ಗ್ರಾ.ಪಂ.ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಕ್ಷಯರೋಗ ನಿಯಂತ್ರಣಾ ಘಟಕ ಕಾಸರಗೋಡು ಹಾಗೂ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸಸ್ ಘಟಕದ ಸಹಯೋಗದಲ್ಲಿ ವಿಶ್ವ ಕ್ಷಯರೋಗ ನಿಯಂತ್ರಣಾ ದಿನಾಚರಣೆ ಅಂಗವಾಗಿ ಪೆರ್ಲ ಪೇಟೆ ಹಾಗೂ ನಾಲಂದ ಕಾಲೇಜಿನಲ್ಲಿ ಜನ ಜಾಗೃತಿ ಕಾರ್ಯಕ್ರಮಗಳು ನಡೆದವು. ಪೆರ್ಲ ಪೇಟೆಯಲ್ಲಿ ನಡೆದ ಕಾರ್ರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಡಿಟಿಸಿ ಕಾಸರಗೋಡು ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ, ಗ್ರಾ.ಪಂ.ಮಾಜಿ
“ಕಥನ ಕಾರಣ” ಅಧ್ಯಯನ ಕೃತಿ ಬಿಡುಗಡೆ
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಹಾಗೂ ಪೆರ್ಲ ನಾಲಂದ ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ಡಾ.ಸುಭಾಷ್ ಪಟ್ಟಾಜೆ ಅವರ ಅಧ್ಯಯನ ಕೃತಿ “ಕಥನ ಕಾರಣ” ಬಿಡುಗಡೆಗೊಳಿಸಲಾಯಿತು ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಜ್ಞಾನವಾಹಿನಿಯಾದ ಭಾಷೆಗೆ ಭಾರತೀಯರು ಬಹಳ ಮಹತ್ವವನ್ನು ಕೊಡುತ್ತಾ ಬಂದಿದ್ದಾರೆ.ಈ ನಿಟ್ಟಿನಲ್ಲಿ ಮನುಷ್ಯನ ಮನಸ್ಸು ಮತ್ತು ಬುದ್ಧಿ ಕಾರ್ಯಪ್ರವೃತ್ತವಾಗುವುದು ಮುಖ್ಯ.ಇದರ ಹಿಂದೆ ನಾಲ್ಕು ಚಕ್ಷುಗಳ ದುಡಿಮೆ ಇರಬೇಕು.ದೇವರ ಮುಂದೆ ಹೊರಕಣ್ಣು ಮುಚ್ಚಿ ಮನಃ ಚಕ್ಷುವನ್ನು ತೆರೆಯುವುದು ಮೊದಲ ಹಂತ.ಮೂರನೆಯದು ಜ್ಞಾನಚಕ್ಷು.
Garden Inauguration
College organised a inauguration function. Programme officer prajith. N led the programme. Governing council director Sri. Kajampady Subramanya Bhat inaugurated the garden which is built by NSS volunteers.
ಉದ್ಯೋಗ ಮೇಳ; 300ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸಂದರ್ಶನದಲ್ಲಿ ಭಾಗಿ
ನಮ್ಮ ದೇಶದಲ್ಲಿ ಪ್ರತಿ ವರ್ಷ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ.ಆದರೆ ಎಲ್ಲರಿಗೂ ಉದ್ಯೋಗ ದೊರೆಯುತ್ತಿಲ್ಲ.ಉದ್ಯೋಗ ಹುಡುಕಿಕೊಂಡು ಕಂಪೆನಿಗಳು ಸಹಿತ ವಿವಿಧೆಡೆ ಅಲೆದಾಡಬೇಕಾಗುತ್ತದೆ. ಉದ್ಯೋಗ ಮೇಳ ಆಯೋಜನೆಯಿಂದ ವಿವಿಧ ಕಂಪನಿಗಳು ಒಂದೆಡೆ ಸೇರುವುದರಿಂದ ಒಂದೇ ಸೂರಿನಲ್ಲಿ ಉದ್ಯೋಗದ ವಿವಿಧ ಅವಕಾಶಗಳು ದೊರೆಯುತ್ತವೆ ಎಂದು ಪುತ್ತೂರು ಸಾಯ ಎಂಟರ್ಪ್ರೈಸಸ್ ಮಾಲೀಕ ಗೋವಿಂದ ಪ್ರಕಾಶ್ ಹೇಳಿದರು. ಕಾಲೇಜು ಕ್ಯಾಂಪಸ್ ನಲ್ಲಿ ಶನಿವಾರ ಕಾಲೇಜು ವಿದ್ಯಾರ್ಥಿಗಳು, ಪದವೀಧರರು, ಸ್ನಾತಕೋತ್ತರ ಪದವೀಧರರು, ಅನುಭವಿಗಳು ಮತ್ತು ಸಾರ್ವಜನಿಕರಿಗೆ ಆಯೋಜಿಸಲಾದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಯುವ ಜನರಿಗೆ ಉದ್ಯೋಗ